ಚಿನ್ನಪ್ಪ ಗೌಡ ಪೈಲೂರುರವರಿಗೆ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ

0

ಅಮರಮುಡ್ನೂರು ಗ್ರಾಮದ ಪೈಲೂರು ನಿವಾಸಿ, ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ‌ ಸಹಕಾರಿ ಸಂಘದ ನಿವೃತ್ತ ಕಾರ್ಯದರ್ಶಿ ಚಿನ್ನಪ್ಪ ಗೌಡ ಪೈಲೂರುರವರು ಅ.24 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಸಭೆ ಮತ್ತು ವೈಕುಂಠ ಸಮಾರಾಧನೆಯು ನ.9 ರಂದು ಪೈಲೂರು ಮನೆಯಲ್ಲಿ ನಡೆಯಿತು.


ಸುಬ್ರಹ್ಮಣ್ಯ ಜೂನಿಯರ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ವಿಶ್ವನಾಥ ನಡುತೋಟರವರು ದಿ.ಚಿನ್ನಪ್ಪ ಗೌಡರವರ ಬಗ್ಗೆ ನುಡಿನಮನ ಸಲ್ಲಿಸಿದರು.


ಆಗಮಿಸಿದ ನೂರಾರು ಜನರು ಒಂದು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಿ ಚಿನ್ನಪ್ಪ ಗೌಡ ಪೈಲೂರುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ
ಮೃತರ ಪತ್ನಿ ಶ್ರೀಮತಿ ಮೀನಾಕ್ಷಿ, ಪುತ್ರ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಲೋಕೇಶ್ ಪೈಲೂರು, ಮುತ್ತೂಟ್ ಫೈನಾನ್ಸ್ ಮ್ಯಾನೇಜರ್ ಯತಿರಾಜ್ ಪೈಲೂರು, ಸಹೋದರ ಅಮರಮುಡ್ನೂರು ಗ್ರಾಮ ಪಂಚಾಯತ್‌ ಮಾಜಿ ಸದಸ್ಯ ಅಣ್ಣಾಜಿ ಗೌಡ ಪೈಲೂರು, ಸಹೋದರಿಯರಾದ ಶ್ರೀಮತಿ ಶೀಲಾವತಿ, ಶ್ರೀಮತಿ ಸರೋಜಿನಿ, ಶ್ರೀಮತಿ ಸುಮತಿ, ಶ್ರೀಮತಿ ಹೇಮಲತಾ, ಸೊಸೆಯಂದಿರಾದ ಶ್ರೀಮತಿ ದೀಪ್ತಿ ಲೋಕೇಶ್, ಶ್ರೀಮತಿ ಶರ್ಮಿಳಾ ಯತಿರಾಜ್ ,
ಶ್ರೀಮತಿ ಕೋಮಲಾಂಗಿ ಅಣ್ಣಾಜಿ ಗೌಡ, ಶ್ರೀಮತಿ ಮಮತಾ, ಡಾ.ಜಗದೀಶ್ಚಂದ್ರ ಮಂಗಳೂರು, ಶ್ರೀಮತಿ ಮಂಜುಳ, ಮುರಳೀದರ ಕೋಡ್ತುಗುಳಿ, ಶ್ರೀಮತಿ ಶೋಭ, ದೇವಿಪ್ರಸಾದ ಕೋಡ್ತುಗುಳಿ, ಶ್ರೀಮತಿ ಸುಶೀಲಾ ,ಸೋಮೇಗೌಡ ಬೆಳ್ತಂಗಡಿ, ಶ್ರೀಮತಿ ಸರೋಜಿನಿ ಸೋಮನಾಥ ಬೆಳಾಲು, ಶ್ರೀಮತಿ ಸುಮತಿ ದಿವಾಕರ ನಡುತೋಟ, ಶ್ರೀಮತಿ ಹೇಮಲತಾ ವಸಂತ ಚಿದ್ಗಲ್ಲು,
ಹಾಗೂ ಮೊಮ್ಮಕ್ಕಳು,ಮರಿಮಕ್ಕಳು, ಕುಟುಂಬಸ್ಥರು ,ಊರವರು, ಬಂಧುಗಳು ಉಪಸ್ಥಿತರಿದ್ದರು.