ಸುಳ್ಯ :ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ಲಪಟಾಯಿಸಿದ ಖದೀಮರು

0

ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸುಳ್ಯ ರಥ ಬೀದಿಯಲ್ಲಿರುವ ಚೆನ್ನಕೇಶವ ಸಂಕೀರ್ಣದಲ್ಲಿ ಕಾರ್ಯಚರಿಸುತ್ತಿರುವ ಜ್ಯುವೆಲ್ಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಚಿನ್ನದ ಬಳೆಯನ್ನು ಲಪಟಾಯಿಸಿರುವ ಘಟನೆ ನವಂಬರ್ ೯ರಂದು ನಡೆದಿದೆ.

ರಾತ್ರಿ ಸಮಯದಲ್ಲಿ ಅಂಗಡಿಯೊಳಗೆ ಗ್ರಾಹಕರಾಗಿ ಬಂದು ಅಂಗಡಿಯ ಮಾಲಕರ ಬಳಿ ಮಾತನಾಡಿ ಅವರ ಗಮನವನ್ನು ಬೇರೆಡೆಗೆ ಸೆಳೆದು ಬೇರೆ ಗ್ರಾಹಕರಿಗೆಂದು ಮಾಡಿಟ್ಟಿದ್ದ ೫ ಗ್ರಾಂ ತೂಕವಿರುವ ಮಕ್ಕಳ ಚಿನ್ನದ ಬಳೆಯನ್ನು ಕದ್ದು ಅಲ್ಲಿಂದ ತೆರಳಿದ್ದಾರೆ.
ಬಳಿಕ ಅಂಗಡಿಯ ಮಾಲಕರಿಗೆ ವಿಷಯ ತಿಳಿದು ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಬಂದಿದ್ದ ಇಬ್ಬರೂ ಅದನ್ನು ಲಪಟಾಯಿಸಿರುವ ವಿಷಯ ಗೊತ್ತಾಗಿದೆ.

ಈ ಘಟನೆಯ ಬಗ್ಗೆ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.