ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಧನಲಕ್ಷ್ಮಿ ಪೂಜೆ

0

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವರ್ಷಂಪ್ರತಿ ನಡೆಯುವ ಧನಲಕ್ಷ್ಮಿ ಪೂಜೆಯು ಇಂದು ಬೆಳಗ್ಗೆ ಸಂಘದ ಕಚೇರಿಯಲ್ಲಿ ನಡೆಯಿತು.

ಪುರೋಹಿತರಾದ ವೆಂಕಟ್ ರಾಜ್ ಬಡ್ಡಡ್ಕ ರವರು ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ಸಿ.ಇ.ಒ ದಿನಕರ ಆಲೆಟ್ಟಿ, ನಿರ್ದೇಶಕರಾದ ಶ್ರೀಮತಿ ವೇದಾವತಿ ಸಣ್ಣಯ್ಯ ಆಲೆಟ್ಟಿ, ನಿವೃತ್ತ ಸಿ.ಇ.ಒ ರತ್ನಾಕರ ಗೌಡ ಕುಡೆಕಲ್ಲು, ಗೋವಿಂದ ಭಟ್ ಎಲಿಕ್ಕಳ, ದೇವಸ್ಥಾನದ ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಮಹಾಬಲ ರೈ ಆಲೆಟ್ಟಿ, ಶಿವಪ್ರಸಾದ್ ಆಲೆಟ್ಟಿ ಹಾಗೂ ಕಚೇರಿಯ ಸಿಬ್ಬಂದಿ ವರ್ಗದವರು ಮತ್ತು ಸದಸ್ಯರು ಭಾಗವಹಿಸಿದರು.