ಸಂಪಾಜೆ : ಪಯಸ್ವಿನಿ ಯುವಕ ಸಂಘ ಹಾಗೂ ಭಕ್ತಾದಿಗಳ ವತಿಯಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಲಿಯೇಂದ್ರ ಮತ್ತು ಗೋಪೂಜೆ

0

ಕೊಡಗು ಸಂಪಾಜೆಯ ಪಯಸ್ವಿನಿ ಯುವಕ ಸಂಘ ಹಾಗೂ ಊರ ಭಕ್ತಾದಿಗಳ ವತಿಯಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ಬಲಿಯೇಂದ್ರ ಪೂಜೆ ಮತ್ತು ಗೋಪೂಜೆ ಕಾರ್ಯಕ್ರಮವು ನ.14ರಂದು ರಾತ್ರಿ ನಡೆಯಿತು.

ಶ್ರೀ ಪಂಚಲಿಂಗೇಶ್ವರನ ಸನ್ನಿಧಿಯಲ್ಲಿ ಕಾರ್ತಿಕ ದೀಪೋತ್ಸವ ನಡೆದು, ಬಲಿಯೇಂದ್ರ ಪೂಜೆ ನಡೆಯಿತು.

ಬಲಿಪಾಡ್ಯಮಿ ಹಬ್ಬದ ಹಿನ್ನಲೆಯನ್ನು ಕಿರಣ್ ಚೌಟಾಜೆ ಅವರು ಸೇರಿದ ಭಕ್ತಾಧಿಗಳಿಗೆ ವಿವರಿಸಿದರು. ನಂತರ ಪಯಸ್ವಿನಿ ಯುವಕ ಸಂಘದ ವತಿಯಿಂದ ಗೋ ಪೂಜೆ ಕಾರ್ಯಕ್ರಮವು ನಡೆಯಿತು. ದೇವಾಲಯದ ಮೊಕ್ತೇಸರರಾದ ಎಂ.ಬಿ. ಸದಾಶಿವ ಅವರು ಗೋಪೂಜೆಯ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಂಪಾಜೆಯ ಸಮಸ್ತ ಭಕ್ತಾಧಿಗಳು, ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಪಯಸ್ವಿನಿ ಯುವಕ ಸಂಘದ ಪಧಾಧಿಕಾರಿಗಳು ಮತ್ತು ಹಿರಿಯ ಕಿರಿಯ ಸದಸ್ಯರುಗಳು ಉಪಸ್ಥಿತರಿದ್ದರು.