ಮುರೂರಿನಲ್ಲಿ ಹೆದ್ದಾರಿಗೆ ಹಾಗೂ ವಿದ್ಯುತ್ ತಂತಿಗಳಿಗೆ ತಾಗಿಕೊಂಡಿರುವ ಕಾಡು ಪೊದೆಗಳು

0

ವಾಹನ ಸವಾರರಿಗೆ ಸಂಕಷ್ಟ; ಅಪಾಯದ ಮುನ್ಸೂಚನೆ

ಜಾಲ್ಸೂರು-ಚೆರ್ಕಳ ಹೆದ್ದಾರಿಯ ಮುರೂರು ತಿರುವುಗಳಲ್ಲಿ ರಸ್ತೆ ಬದಿಯಲ್ಲಿರುವ ಕಾಡು ಪೊದೆಗಳು ರಸ್ತೆಗೆ ತಾಗಿಕೊಂಡಿದ್ದು ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ.

ಕಾಡು ಪೊದೆಗಳು ಬೃಹದಾಕಾರದಲ್ಲಿ ರಸ್ತೆಗೆ ವಾಲಿಕೊಂಡಿದ್ದು ಒಂದು ಕಡೆಯಿಂದ ಬರುವ ವಾಹನಗಳಿಗೆ ಎದುರಿನಿಂದ ಬರುವ ವಾಹನಗಳು ಕಾಣದೆ ಅಪಘಾತಗಳು ಸಂಭವಿಸುವ ಆತಂಕ ಕಂಡು ಬರುತ್ತಿದೆ.

ಅಲ್ಲದೆ ಈ ಭಾಗದ ವಿದ್ಯುತ್ ಕಂಬ ಮತ್ತು ತಂತಿಗಳಿಗೆ ಕಾಡು ಬಳ್ಳಿಗಳು ಸುತ್ತಿಕೊಂಡಿದ್ದ ಮುಂದಿನ ದಿನಗಳಲ್ಲಿ ವಿದ್ಯುತ್ ಸ್ಪಾರ್ಕ್ ಗೊಳ್ಳುವ ಆತಂಕ ಕೂಡ ಇದೆ. ಆದ್ದರಂದ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.