ರಾಜ್ಯ ಮೆಸ್ಕಾಂ ಕಬಡ್ಡಿ ತಂಡಕ್ಕೆ ಆಯ್ಕೆಯಾದ ತನ್ವೀರ್ ರಿಗೆ ಗೌರಾವಾರ್ಪಣೆ

0

        ಎಸ್ಕಾಂ ವತಿಯಿಂದ ಮೈಸೂರಿನಲ್ಲಿ ನಡೆಯಲಿರುವ 5ವಲಯ ಮಟ್ಚದ ಕಬಡ್ಡಿ ಪಂದ್ಯಾಟದಲ್ಲಿ ಮೆಸ್ಕಾಂ ತಂಡಕ್ಕೆ ಆಯ್ಕೆಯಾಗಿರುವ ಆಟಗಾರ ಸುಳ್ಯದ ಮಹಮ್ಮದ್ ತನ್ವೀರ್ ರವರನ್ನು ನ.16 ರಂದು ಉದ್ಯಮಿ ಹನೀಫ್ ಬುಶ್ರ ರವರ ನಿವಾಸ "ಮೆಹಫಿಲ್" ನಲ್ಲಿ ಮಲೆನಾಡು ಚಾರಿಟೇಬಲ್ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. 

ಈ ಕಾರ್ಯಕ್ರಮವನ್ನು ಹಿರಿಯ ಚಲನಚಿತ್ರ ನಟ ರಮೇಶ್ ಭಟ್ ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ರಿಯಾಝ್ ಕಟ್ಟೆಕ್ಕಾರ್ ಹಾಗೂ ಉದ್ಯಮಿ ಹನೀಫ್ ಬುಶ್ರ ಉಪಸ್ಥಿತರಿದ್ದರು.