ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನದ ಚಲನ ಚಿತ್ರ ಸುಳ್ಯದಲ್ಲಿ ಚಿತ್ರೀಕರಣ : ತಂಡಕ್ಕೆ ಗೌರವ

0

ಸುಳ್ಯದ ಮಯೂರ್ ಅಂಬೆಕಲ್ಲು ಸಂಗೀತ ನಿರ್ದೇಶನದ ಹಾಗೂ ಸುಳ್ಯ
ಪರಿಸರದಲ್ಲಿ ಚಿತ್ರೀಕರಣವಾಗುತಿರುವ ಚಿತ್ರ ತಂಡ ಸುಳ್ಯಕ್ಕೆ ಆಗಮಿಸಿದ್ದು ತಂಡದ ಸದಸ್ಯ, ಹಿರಿಯ ಚಿತ್ರ ನಟ ರಮೇಶ್ ಭಟ್, ಸಂಗೀತ ನಿರ್ದೇಶಕರಾಗಿರುವ ಸುಳ್ಯದ ಮಯೂರ ಅಂಬೆಕ್ಕಲ್ಲು, ನಾಯಕ ನಟರಾಗಿರುವ ತೇಜಸ್ ಕಿರಣ್ ಇವರನ್ನು ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎನ್.ಎ.ರಾಮಚಂದ್ರ ,ಟ್ರಸ್ಟ್ ಅದ್ಯಕ್ಷರಾದ ರಿಯಾಝ್ ಕಟ್ಟೆಕ್ಕಾರ್ , ತಾಲೂಕು ವಾಲಿಬಾಲ್ ಅಸೋಸಿಯೇಶನ್ ಕೋಶಾಧಿಕಾರಿ ಕೆ.ಬಿ.ಇಬ್ರಾಹಿಂ ಹಾಗೂ ಹನೀಫ್ ಬುಶ್ರ ಉಪಸ್ಥಿತರಿದ್ದರು.

ಉದ್ಯಮಿ ಹನೀಫ್ ಬುಶ್ರ ರವರ ಗೃಹ ಕಛೇರಿ [ಮೆಹಫಿಲ್] ಯಲ್ಲಿ ಸನ್ಮಾನಿಸಲಾಯಿತು.