ಮೇನಾಲದಲ್ಲಿ ಮಕ್ಕಳ ದಿನಾಚರಣೆ : ಮಾಹಿತಿ ಕಾರ್ಯಾಗಾರ : ಸಮವಸ್ತ್ರ ಕೊಡುಗೆ

0

ವಿಷ್ಣು ಯುವಕ ಮಂಡಲ( ರಿ) ಮೇನಾಲ ಹಾಗೂ ಅಂಚೆ ಕಛೇರಿ ಅಜ್ಜಾವರ ಇದರ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ ಮತ್ತು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಅಂಚೆ ವಿಮಾ ಯೋಜನೆಯ ನೋಂದಣಿ ಮತ್ತು ಮಾಹಿತಿ ಕಾರ್ಯಾಗಾರ ನ.20 ರಂದು‌ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಮೇನಾಲ ಕಾಳಿಕಾ ದುರ್ಗಾಪರಮೇಶ್ವರಿ ಕ್ಷೇತ್ರದ ಧರ್ಮದರ್ಶಿ ಪದ್ಮನಾಭ ಸ್ವಾಮಿಗಳು ನೆರವೇರಿಸಿದರು.
ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ರಂಜಿತ್ ರೈ ಮೇನಾಲ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ, ಸುಳ್ಯ ಸಿ.ಎ.ಬ್ಯಾಂಜ್ ಮಾಜಿ ಅಧ್ಯಕ್ಷ ಸುಭೋದ್ ಶೆಟ್ಟಿ ಮೇನಾಲ, ಕೆನರಾ ಬ್ಯಾಂಕ್ ನಿವೃತ್ತ ಮ್ಯಾನೇಜರ್
ರಾಮಚಂದ್ರ ಪಲ್ಲತಡ್ಕ, ಅಂಚೆ ಪಾಲಕ ಮೋಹನ್ ಎಂ ಕೆ., ಸಿಡಿಪಿಒ
ಶೈಲಜಾ ಬಿ, ಮೇಲ್ವಿಚಾರಕಿ
ಉಷಾಪ್ರಸಾದ್ ರೈ ಉಪಸ್ಥಿತರಿದ್ದರು.

ಅಂಗನವಾಡಿ ಮಕ್ಕಳಿಗೆ ಸಮವಸ್ತ್ರವನ್ನು ವಿಷ್ಣು ಬೋರ್ ವೆಲ್ ಮಾಲಕ ಹರಿಪ್ರಸಾದ್ ಸುಲಾಯರು ಕೊಡುಗೆಯಾಗಿ ನೀಡಿದರು

ರಂಜಿತ್ ರೈ ಸ್ವಾಗತಿಸಿದರು. ಮೋಹನ್ ಕುಲಾಲ್ ಹಾಗೂ ಉಮೇಶ್ ಕಾರ್ಯಕ್ರಮ ನಿರೂಪಿಸಿದರು.