ಕಮಲ ಪೈಲಾರು ನಿಧನ

0

ಅಮರಪಡ್ನೂರು ಗ್ರಾಮದ ಪೈಲಾರು ದಿ. ದೇವಪ್ಪ ನಾಯ್ಕರ ಧರ್ಮಪತ್ನಿ ಶ್ರೀಮತಿ ಕಮಲ ಅಸೌಖ್ಯದಿಂದ ನ. 21ರಂದು ನಿಧನರಾದರು. ಇವರಿಗೆ 86 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಮ್ಯಾನೇಜರ್, ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಜನಾರ್ಧನ ಬಿ. ಕುರುಂಜಿಭಾಗ್, ಆಲೂರಿನಲ್ಲಿ ಉಪನ್ಯಾಸಕರಾಗಿರುವ ಸುಧಾಕರ ನಾಯ್ಕ್, ಅಮರಮುಡ್ನೂರು ಗ್ರಾ.ಪಂ. ಸದಸ್ಯ ದಿವಾಕರ ನಾಯ್ಕ್, ಪುತ್ರಿ ಶ್ರೀಮತಿ ಸರೋಜ ಚನಿಯಪ್ಪ ನಾಯ್ಕ್ ಕಾವು, ಸಹೋದರ ನಿವೃತ್ತ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸುಂದರ ನಾಯ್ಕ್ ಐ.ಎಫ್.ಎಸ್, ಸಹೋದರಿಯರಾದ ಅಮೇರಿಕಾದಲ್ಲಿ ನೆಲೆಸಿರುವ ಶ್ರೀಮತಿ ರತ್ನಾವತಿ ಎಂ.ಸಿ. ನಾಯ್ಕ, ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀಮತಿ ಸುಶೀಲಾ ದೇವರಾಜ ನಾಯ್ಕ್ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.