ದಿ.ಶ್ರೀಮತಿ ಕೆಂಚಮ್ಮ ನೆಕ್ರಾಜೆಯವರ ಶ್ರದ್ಧಾಂಜಲಿ ಸಭೆ

0

ಇತ್ತಿಚೆಗೆ ನಿಧನರಾದ ಏನೆಕಲ್ಲು ಗ್ರಾಮದ ನೆಕ್ರಾಜೆ ದಿ. ಚಿನ್ನಪ್ಪ ಗೌಡರ ಪತ್ನಿ, ಶ್ರೀಮತಿ ಕೆಂಚಮ್ಮ ರವರ ಶ್ರದ್ಧಾಂಜಲಿ ಸಭೆಯು ನ. 23 ರಂದು ನೆಕ್ರಾಜೆ ಮನೆಯಲ್ಲಿ ನಡೆಯಿತು.

ಅಶೋಕ್ ನೆಕ್ರಾಜೆ ಮತ್ತು ಮೋಹಿತ್ ಜೇನುಕೋಡಿಯವರು ನುಡಿ ನಮನ ಸಲ್ಲಿಸಿ, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.

ಈ ಸಂದರ್ಭದಲ್ಲಿ ಮೃತರ ಪುತ್ರರಾದ ಚಂದ್ರಶೇಖರ ನೆಕ್ರಾಜೆ, ಪುತ್ರಿಯರಾದ ಶ್ರೀಮತಿ ಜಾನಕಿ ಕೋನಜೆ, ಶ್ರೀಮತಿ ನಾಗವೇಣಿ ಕಮಿಲ, ಶ್ರೀಮತಿ ಭಾಗೀರಥಿ ಹುದೇರಿ, ಶ್ರೀಮತಿ ಜಯಂತಿ ಪರಮಲೆ , ಸೊಸೆಯಂದಿರು, ಅಳಿಯಂದಿರು, ಸಹೋದರಿಯರು, ಕುಟುಂಬಸ್ಥರು ಹಾಗೂ ಊರವರು ಇದ್ದರು.

ಭರತ್ ನೆಕ್ರಾಜೆ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.