ಜಮೀಯ್ಯತ್ತುಲ್ ಪಲಾಹ್ ನೂತನ ಕಛೇರಿ ಉದ್ಘಾಟನೆ,ವಿದ್ಯಾರ್ಥಿ ವೇತನ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮ

0

ಜಮೀಯ್ಯತ್ತುಲ್ ಪಲಾಹ್ ನೂತನ ಕಛೇರಿ ಉದ್ಘಾಟನೆ,ವಿದ್ಯಾರ್ಥಿ ವೇತನ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಜಮೀಯ್ಯತ್ತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ನೂತನ ಕಛೇರಿ ಗಾಂಧಿನಗರ ಅನ್ಸಾರ್ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆ ಗೊಂಡಿತು. ವಿದ್ಯಾರ್ಥಿ ವೇತನ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಅನ್ಸಾರಿಯ ಎಜುಕೇಶನ್ ಸೆಂಟರ್ ಸಭಾಂಗಣದಲ್ಲಿ ನಡೆಯಿತು. ದ.ಕ.ಜಿಲ್ಲಾ ಜಮೀಯ್ಯತ್ತುಲ್ ಪಲಾಹ್ ಅಧ್ಯಕ್ಷ ಶಾಹುಲ್ ಹಮೀದ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು. ಸುಳ್ಯ ತಾಲೂಕು ಜಮೀಯ್ಯತ್ತುಲ್ ಪಲಾಹ್ ಅಧ್ಯಕ್ಷ ಅಬೂಭಕ್ಕರ್ ಪಾರೆಕ್ಕಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಾಜಿ ಹಸೈನಾರ್ ಗೋರಡ್ಕ ಪ್ರಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ ಎಂ ಶಹೀದ್, ನ.ಪಂ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ,ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಜಿಲ್ಲಾ ಉಪಾಧ್ಯಕ್ಷ ಕೆ.ಎಂ ಮುಸ್ತಫಾ,ನ.ಪಂ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್, ಕೆಪೆಕ್ ಮಾಜಿ ನಿರ್ದೇಶಕ ಹಾಜಿ ಪಿ ಎ ಮಹಮ್ಮದ್,ದ.ಕ ಜಿಲ್ಲಾ ಕೆಎಂಜೆ ಉಪಾಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ,ನ.ಪಂ ಸದಸ್ಯರಾದ ಶರೀಫ್ ಕಂಠಿ,ಉಮ್ಮರ್ ಕೆ ಎಸ್,ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಜನತಾ,ಉಪಾಧ್ಯಕ್ಷ ಎಸ್ ಪಿ ಅಬೂಭಕ್ಕರ್,ಅನ್ಸಾರಿಯ ಜಿಸಿಸಿ ಸಮಿತಿ ಕೋಶಾಧಿಕಾರಿ ಹಾಜಿ ಅಬ್ದುಲ್‌ ಹಮೀದ್ ಎಸ್ ಎಂ , ಸಂಪಾಜೆ ಗ್ರಾ.ಪಂ ಮಾಜಿ ಅಧ್ಯಕ್ಷ ಜಿ.ಕೆ ಹಮೀದ್, ಖಾದರ್ ಮೊಟ್ಟೆಂಗಾರ್ ,ಇಬ್ರಾಹಿ ಕತ್ತಾರ್, ಪಿ ಎ ಉಮ್ಮರ್ ಹಾಜಿ ಗೂನಡ್ಕ, ಮೊದಲಾದವರು ಉಪಸ್ಥಿತರಿದ್ದರು. ಜಮೀಯ್ಯತ್ತುಲ್ ಪಲಾಹ್ ಸುಳ್ಯ ಘಟಕದ ಉಪಾಧ್ಯಕ್ಷರಾದ ಮಹಮ್ಮದ್ ಪವಾಜ್, ಶಾಫಿ ಕುತ್ತಮೊಟ್ಟೆ,ಜೊತೆ ಕಾರ್ಯದರ್ಶಿ ಎಸ್.ಕೆ ಹನೀಫ್,ಪತ್ರಿಕಾ ಕಾರ್ಯದರ್ಶಿ ಅಮೀರ್ ಕುಕ್ಕುಂಬಳ,ನಿರ್ದೇಶಕರುಗಳಾದ ಹಸೈನಾರ್ ಹಾಜಿ ಗೊರಡ್ಕ,ಅಬ್ಬಾಸ್ ಹಾಜಿ ಸೆಂಟ್ಯಾರ್,ಅಬ್ದುಲ್‌ ಮಜೀದ್ ಅರಂತೋಡು,ಅಬೂಭಕ್ಕರ್ ಸಿದ್ದೀಕ್ ಕಟ್ಟೆಕ್ಕಾರ್, ರಿಯಾಜ್ ಕಟ್ಟೆಕ್ಕಾರ್, ಮಹಮ್ಮದ್ ಕುಂಞಿ ಕುಂಭಕ್ಕೊಡು, ಅಬ್ದುಲ್‌ ರಜಾಕ್ ಎಣ್ಮೂರ್,ಜುಬೈರ್ ಅರಂತೋಡು,ಬಶೀರ್ ಯು.ಪಿ ಬೆಳ್ಳಾರೆ, ಇಬ್ರಾಹಿಂ ನಿರಬಿದರೆ,ಅಬ್ದುಲ್‌ ಖಾದರ್ ಪಟೇಲ್, ಸಿ ಹೆಚ್ ಅಬ್ದುಲ್‌ ಖಾದರ್ ಕಲ್ಲುಗುಂಡಿ,ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಜಿಲ್ಲಾದ್ಯಕ್ಷರಾದ ಶಾಹುಲ್ ಹಮೀದ್ ಕೆ.ಕೆ ಹಾಗೂ ಯುವ ಉದ್ಯಮಿ ಶಾಹುಲ್ ಹಮೀದ್ ಕುತ್ತಮೊಟ್ಟೆ ಯವರನ್ನು ಅಭಿನಂದಿಸಿ ಗೌರವಿಸಲಾಯಿತು.

ಐವತ್ತು ಹೆಚ್ಚು ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಮೂಸಾ ಪೈಂಬಚ್ಚಾಲ್ ಸ್ವಾಗತಿಸಿ ಕೋಶಾಧಿಕಾರಿ ಅಬೂಭಕ್ಕರ್ ಅಡ್ಕಾರ್,ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.