ಕುಂಚಡ್ಕ ಮಹಾಲಕ್ಷ್ಮಿ ಭವನದಲ್ಲಿ ಶ್ರೀ ಮದ್ ಭಾಗವತ ಸಪ್ತಾಹ ಯಜ್ಞ ಆರಂಭ

0

ಕುಂಚಡ್ಕ ಐನ್ ಮನೆಯ ಶ್ರೀ ಮಹಾಲಕ್ಷ್ಮಿ ಭವನದಲ್ಲಿ ಒಂದು ವಾರಗಳ ಕಾಲ ನಡೆಯಲಿರುವ ಶ್ರೀ ಮದ್ ಭಾಗವತ ಸಪ್ತಾಹ ಯಜ್ಞವು ಇಂದು ಬೆಳಗ್ಗೆ ಆರಂಭಗೊಂಡಿತು.


ಇಂದಿನಿಂದ ಡಿ.17 ರ ತನಕ ನಿರಂತರವಾಗಿ ಕೇರಳದ ಕಾಂಞಂಗಾಡ್ ಯಜ್ಞಾಚಾರ್ಯರಾದ ಗುರುಪುರಂ ನಾರಾಯಣ ಮೂರ್ತಿಯವರ ನೇತೃತ್ವದಲ್ಲಿ ಪ್ರತಿ ದಿನ ಭಾಗವತ ಮಹಾತ್ಮ ವರ್ಣನೆಯು ಸಪ್ತಾಹದಲ್ಲಿ ನಡೆಯಲಿದೆ. ಬೆಳಗ್ಗೆ ಪ್ರಾರಂಭಗೊಂಡು ಸಂಜೆಯ ತನಕ ಭಾಗವತದ ಕಥಾನಕವು ವರ್ಣನೆ ನೀಡಲಿದ್ದಾರೆ. ದಿನಂಪ್ರತಿ ಸಂಜೆ ಭಜನಾ ಸಂಕೀರ್ತನೆ ಹಾಗೂ ಮಹಾಪೂಜೆಯು ನಡೆಯಲಿರುವುದು. ಇಂತಹ ಕಾರ್ಯಕ್ರಮಗಳು ಈ ಭಾಗದಲ್ಲಿ ಅಪರೂಪವಾಗಿ ಕಾಣಸಿಗುವುದು.