ಮುರುಳ್ಯ ಹಾಲು ಉತ್ಪಾದಕರ ಸಹಕಾರ ಸಂಘ ಚುನಾವಣೆ

0

ಮುರುಳ್ಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಡಿ.21ರಂದು ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ನಡೆಯಲಿದ್ದು 15 ಜನರು ನಾಮಪತ್ರ ಸಲ್ಲಿಸಿದ್ದರು.

ಹರೀಶ್ ರೈ, ಎಂ. ಬಿ. ಸೀತಾರಾಮ ಗೌಡ, ಕೆ. ಬಾಲಕೃಷ್ಣ ಗೌಡ, ಪಿ. ರೂಪರಾಜ್ ರೈ, ಶೂರಪ್ಪ ಗೌಡ ಎ., ಸುಂದರ ಗೌಡ, ಕೆ ಜಗನ್ನಾಥ ರೈ, ರಾಮಚಂದ್ರ, ಅಶೋಕ್ ಕುಮಾರ್ ರೈ, ಸುಂದರಿ, ಸಾವಿತ್ರಿ ಪಿ., ಭವ್ಯ, ಅವಿನಾಶ್ ಡಿ., ಲೀಲಾವತಿ ಪಿ. ಆರ್., ಗೀತಾ ಕೆ., ಇವರೆಲ್ಲರೂ ಸಂಘದ ಚುನಾವಣಾಧಿಕಾರಿಯವರಿಗೆ ಡಿ.9ರಂದು ನಾಮಪತ್ರ ಸಲ್ಲಿಸಿದ್ದರು. ಇವರಲ್ಲಿ ಡಿ.15ರಂದು ಭವ್ಯ, ಅವಿನಾಶ್, ಲೀಲಾವತಿ, ಗೀತಾರವರನ್ನು ಹೊರತು ಇತರ 11 ಮಂದಿ ನಾಮಪತ್ರ ಹಿಂತೆಗೆದುಕೊಂಡರು.

ಡಿ.15 ರಂದು ಕಛೇರಿಯಲ್ಲಿ ರಿಟರ್ನಿಂಗ್ ಅಧಿಕಾರಿ ಶಿವಲಿಂಗಯ್ಯನವರು ಕಣದಲ್ಲಿರುವ ನಾಲ್ವರ ಹೆಸರನ್ನು ಅಧಿಕೃತವಾಗಿ ಘೋಷಿಸಿದರು. 6 ತಿಂಗಳ ಅಂದಾಜು ಆಡಳಿಧಿಕಾರಿಯ ನೇಮಕವಾಗಲಿದೆ ಎಂದು ತಿಳಿದುಬಂದಿದೆ.