ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದ ಕುಕ್ಕುಜಡ್ಕದ ವ್ಯಕ್ತಿಗೆ ಪಂಚಾಯತ್ ನಿಂದ ದಂಡ

0

ತ್ಯಾಜ್ಯ ಎಸೆದವರಿಂದಲೇ ತ್ಯಾಜ್ಯ ವಿಲೇವಾರಿಗೊಳಿಸಿದ ಪಂಚಾಯತ್

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆ ಎಂಬಲ್ಲಿ ಡಿ.16 ರಂದು ತ್ಯಾಜ್ಯ ಎಸೆದ ಕುಕ್ಕುಜಡ್ಕ ನಿವಾಸಿ ಮೋಹಿತ್ ಎಂಬವರಿಗೆ ರೂ 5000.00 ದಂಡ ವಿಧಿಸಿದ ಘಟನೆ ಡಿ.18 ರಂದು ನಡೆದಿದೆ.


ಡಿ.16 ರಂದು ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದಿದ್ದನ್ನು ಪತ್ತೆ ಹಚ್ಚಿದ ಪಂಚಾಯತ್ ಸಿಬ್ಬಂದಿ ಪುರುಷೋತ್ತಮ ಗೌಡರು ತ್ಯಾಜ್ಯ ತುಂಬಿದ್ದ ಬ್ಯಾಗ್ ಪರಿಶೀಲಿಸಿ ದಿನಾಂಕ: 18/12/2023 ರಂದು ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ ಆರ್ ಮೂಲಕ ತ್ಯಾಜ್ಯ ಎಸೆದ ವ್ಯಕ್ತಿಯನ್ನು ಪತ್ತೆ ಹಚ್ಚಿ ಸಂಪರ್ಕಿಸಿ ದಂಡ ವಿಧಿಸಿ ತ್ಯಾಜ್ಯ ಎಸೆದವರಿಂದಲೇ ತ್ಯಾಜ್ಯವನ್ನು ವಿಲೇವಾರಿಗೊಳಿಸಲಾಯಿತೆಂದು ತಿಳಿದು ಬಂದಿದೆ.