ಕೂತ್ಕುಂಜ: ನಾಗನಕಟ್ಟೆ ಪರಿವಾರ ದೈವಗಳ ಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ

0

ಕೂತ್ಕುಂಜ ಶ್ರೀ ಶಂಕರನಾರಾಯಣ ದೇವಾಲಯದ ಜೀರ್ಣೋದ್ಧಾರ ನಡೆಯುತ್ತಿದ್ದು ಇಲ್ಲಿನ ನಾಗನಕಟ್ಟೆ ಪರಿವಾರ ದೈವಗಳಾದ ರಕ್ತೇಶ್ವರಿ ಗುಳಿಗ ಪಂಜುರ್ಲಿ ಕಟ್ಟೆಗಳ ಶಿಲಾನ್ಯಾಸ ವಿವಿಧ ವೈಧಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ದೇಗುಲದ ಆಡಳಿತ ಮಂಡಳಿ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ಹೆಗ್ಡೆ, ವಾಸ್ತುಶಿಲ್ಪಿ ಮಹೇಶ್ ಮನಿಯಂಗಳ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ಉತ್ಸವ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ದೇಗುಲದ ಜೀರ್ಣೋದ್ಧಾರ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್, ಆಡಳಿತ ಮಂಡಳಿ ಕಾರ್ಯದರ್ಶಿ ಶಿವರಾಮಯ್ಯ ಕರ್ಮಜೆ, ಸದಸ್ಯರಾದ ಶ್ರೀ ವೆಂಕಟೇಶ್ವರ ಜೋಯಿಸ, ಶರತ್ ಹೆಗ್ಡೆ, ಭರತ್ ಹೆಗ್ಡೆ, ತಿಮ್ಮಪ್ಪ ಕೂತ್ಕುಂಜ ,ಚೆನ್ನಕೇಶವ ಆರ್ನೋಜಿ, ಶಶಿ ,ಭಕ್ತಾದಿಗಳು ಉಪಸ್ಥಿತರಿದ್ದರು. ವೈಧಿಕ ಕಾರ್ಯಕ್ರಮವನ್ನು ಅರ್ಚಕ ಅಂಗೀರಥ ಶರ್ಮ ವಳಲಂಬೆ ರವರು ನಡೆಸಿಕೊಟ್ಟರು.