ಜ.6 : ಗೂನಡ್ಕದಲ್ಲಿ‌ ಸಜ್ಜನೋತ್ಸವ ಹಾಗೂ ” ಯಾರಾಗುವಿರಿ ಸಜ್ಜನ ಲಕ್ ಪತಿ ?” ಕಾರ್ಯಕ್ರಮ

0

ಡಾ. ಆರ್.ಕೆ . ನಾಯರ್ ಮತ್ತು ಡಾ . ಶಿವರಾಂ ರಿಗೆ ಸಜ್ಜನ ಸಿರಿ ಪ್ರಶಸ್ತಿ ಪ್ರದಾನ

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ಸಜ್ಜನೋತ್ಸವ ಹಾಗೂ ಯಾರಾಗುವಿರಿ ಸಜ್ಜನ ಲಕ್’ಪತಿ” ಕಾರ್ಯಕ್ರಮ ಜ.6 ರಂದು ಗೂನಡ್ಕ ಸಜ್ಜನ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಜ್ಜನ ಸಿರಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಗ್ರೀನ್ ಹೀರೋ ಆಪ್ ಇಂಡಿಯಾ ಖ್ಯಾತಿಯ ಪರಿಸರ ಪ್ರೇಮಿ ಡಾ. ಆರ್ .ಕೆ. ನಾಯರ್ ಮತ್ತು ಮಂಗಳೂರು ಕಾವೂರು ಕಾಲೇಜು ಪ್ರಾಂಶುಪಾಲರಾದ ಪ್ರೊಫೆಸರ್ ಡಾ.ಶಿವರಾಂ ಅವರು ಸಜ್ಜನ ಸಿರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಿದ್ಯಾರ್ಥಿಗಳ ಜ್ಞಾನ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ಕೌನ್ ಬನೇಗಾ ಲಕ್ ಪತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಜ್ಜನ ಅದೃಷ್ಟ ದಪಂತಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.
ಸಮಾರೋಪ ಸಮಾರಂಭ, ಬಹುಮಾನ ವಿತರಣಾ ಕಾರ್ಯಕ್ರಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ತಿಳಿಸಿದ್ದಾರೆ.