ಮರ್ಕಂಜ : ಮುಂಡೋಡಿ‌ ಮಾಳಿಗೆ ಶ್ರೀ ಶೀರಾಡಿ ಯಾನೆ ರಾಜನ್ ದೈವಕ್ಕೆ ನವೀಕೃತ ಮೂಲಸ್ಥಾನದ ಸಮರ್ಪಣೆ – ಪುನಃ ಪ್ರತಿಷ್ಠಾ ಕಲಶ

0

ಮರ್ಕಂಜ ಹಾಗೂ ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಲ್ಲಿ ಒಂದಾದ ಮುಂಡೋಡಿ‌ ಮಾಳಿಗೆ ಶ್ರೀ ರಾಜನ್ ಯಾನೆ ಶೀರಾಡಿ ದೈವಸ್ಥಾನ ಪುನರ್ ನವೀಕರಿಸಲ್ಪಟ್ಟಿದ್ದು, ದೈವಕ್ಕೆ ನವೀಕೃತ ಮೂಲಸ್ಥಾನದ ಸಮರ್ಪಣೆ ಹಾಗೂ ಶೀರಾಡಿ ದೈವದ ಪುನಃ ಪ್ರತಿಷ್ಠಾ ಕಲಶ ಸಹಿತ ವಿವಿಧ ಕಾರ್ಯಕ್ರಮಗಳು ಡಿ.27, 28, 29ರಂದು ನಡೆಯಲಿದೆ.
ಡಿ.27ರಂದು ಹಸಿರುವಾಣಿ‌ ಮೆರವಣಿಗೆ ನಡೆಯಲಿದೆ. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು, ಡಿ.29ರಂದು ಪ್ರತಿಷ್ಠಾ ಕಲಶ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.