ದಿಶಾಲಕ್ಷ್ಮೀ ಆರ್. ಭಟ್ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯಗಳ ಸೌತ್ ಝೋನ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಮಂಗಳೂರು ವಿ.ವಿ.ಗೆ ಆಯ್ಕೆ

0

ಡಿ.೧೩ ಮತ್ತು ೧೪ರಂದು ಮಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ದಿಶಾಲಕ್ಷ್ಮೀ ಆರ್. ಭಟ್ ರವರು ಮಂಗಳೂರಿನ ಕೆನರಾ ಕಾಲೇಜನ್ನು ಪ್ರತಿನಿಧಿಸಿ ತೃತೀಯ ಸ್ಥಾನವನ್ನು ಗಳಿಸಿ ಇದೀಗ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯಗಳ ಸೌತ್ ಝೋನ್ ಪಂದ್ಯಾಟಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರು ಸುಳ್ಯ ತಾ. ತೊಡಿಕಾನದ ರವಿಚಂದ್ರ ಭಟ್ ಮತ್ತು ದೀಪಾ ಆರ್. ಭಟ್ ಇವರ ಪುತ್ರಿ.