ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ಟೌನ್ ನೂತನ ಸಮಿತಿ ಅಸ್ತಿತ್ವಕ್ಕೆ

0

ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ಟೌನ್ ಶಾಖೆಯ ದ್ವೈವಾರ್ಷಿಕ ಮಹಾಸಭೆ ಹಾಗೂ 2024-26 ರ ನೂತನ ಸಮಿತಿ ರಚನೆ ಡಿ.25 ರಂದು ಸುಳ್ಯ ಸುನ್ನಿ ಮಹಲ್ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಇಕ್ಬಾಲ್ ಸುಳ್ಯ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶಮೀಮ್ ಅರ್ಷದಿ ಮತ್ತು ಚುನಾವಣಾ ವೀಕ್ಷಕರಾಗಿ ಸಿದ್ದಿಕ್ ಅಡ್ಕ, ಸಿದ್ದಿಕ್ ಬೋವಿಕ್ಕಾನ ಆಗಮಿಸಿದ್ದರು.2024-26 ರ ನೂತನ ಸಮಿತಿಯನ್ನು ಆಯ್ಕೆ ಮಾಡಿ
ನೂತನ ಅಧ್ಯಕ್ಷರಾಗಿ ಮುಹಮ್ಮದ್ ಮಸೂದ್ ಕೆ ಎ,ಪ್ರ. ಕಾರ್ಯದರ್ಶಿಯಾಗಿ ಅಬ್ದುಲ್ ರವೂಫ್ ಎಸ್ ಎಂ, ಕೋಶಾಧಿಕಾರಿಯಾಗಿ ಅಬ್ದುಲ್ ಕುಂಞ ಅರಂಬೂರು,ವರ್ಕಿಂಗ್ ಕಾರ್ಯದರ್ಶಿಯಾಗಿ ನಿಝಾರ್ ಅಂಜಿಕ್ಕಾರ್,ಉಪಾಧ್ಯಕ್ಷರುಗಳಾಗಿ ಇಕ್ಬಾಲ್ ಸುಳ್ಯ ಹಾಗೂ ಪಿ ಎ ಅಬ್ದುಲ್ಲ, ಜೊತೆ ಕಾರ್ಯದರ್ಶಿಗಳಾಗಿ ನಾಸಿರುದ್ದೀನ್ ಮಾಂಬ್ಲಿ ಹಾಗೂ ಸಂಶುದ್ದೀನ್ ಹೆಚ್.ಎಲ್.ಎಸ್ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಝಕರಿಯ ಫೈಝಿ , ಅಬ್ದುಲ್ಲಾಹಿಲ್ ಜಲಾಲ್, ಮುಹಮ್ಮದ್ ಅಂಶಿಫ್, ಅಹ್ಮದ್ ಶಾಮಿಲ್, ಮಾಹಿನ್ ಶಹದ್, ಮುಹಮ್ಮದ್ ಜಾಝಿನ್, ಮುಹಮ್ಮದ್ ಹಾಶಿರ್ ಹಾಗೂ ಕ್ಲಸ್ಟರ್ ಕೌನ್ಸಿಲರ್ ಗಳಾಗಿ ಅಕ್ಬರ್ ಕರಾವಳಿ, ಆಶಿಕ್ ಸುಳ್ಯ, ಶಹೀದ್ ಪಾರೆ, ಕಲಂದರ್ ಎಲಿಮಲೆ, ಅಬ್ದುಲ್ ರಝಾಕ್ ಕರಾವಳಿ ಆಯ್ಕೆಯಾದರು.
ನೂರರ ಹೊಸ್ತಿಲಲ್ಲಿರುವ ಬಹುಮಾನ್ಯ ಸಮಸ್ತದ ಕಾರ್ಯಚಟುವಟಿಕೆಗಳನ್ನು ಬಲಪಡಿಸಲು ಯೋಜನೆ ರೂಪಿಸುವ, ಹಾಗೂ ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯ ಚಟುವಟಿಕೆಗಳ ಮೂಲಕ ಸಂಘವನ್ನು ಮುನ್ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಅಗಲಿದ ಸಮಸ್ತದ ನಾಯಕರುಗಳು ಮತ್ತು ಕಾರ್ಯಕರ್ತರನ್ನು ಸ್ಮರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಸಭೆಯಲ್ಲಿ ಹಿರಿಯರಾದ ಹಮೀದ್ ಹಾಜಿ,ಇಕ್ಬಾಲ್ ಸುಣ್ಣಮೂಲೆ ಮುಂತಾದ ನಾಯಕರುಗಳು ಉಪಸ್ಥಿತರಿದ್ದರು.
ಸಂಘಟನೆಯ ಮುಖಂಡರಾದ ಆಶಿಕ್ ಸುಳ್ಯ ಸ್ವಾಗತಿಸಿ,ಅಕ್ಬರ್ ಕರಾವಳಿ ವಂದಿಸಿದರು.