ಬೆಂಗಳೂರು ಮಿಡ್ ನೈಟ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಶ್ರೀಮತಿ ವಿದ್ಯಾಹರೀಶ್ ಬಂಗಾರಕೋಡಿ ಅವರಿಗೆ ಬೆಳ್ಳಿಪದಕ

0

ಬೆಂಗಳೂರಿನಲ್ಲಿ ಡಿ.17ರಂದು ನಡೆದ ಮಿಡ್ ನೈಟ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಶ್ರೀಮತಿ ವಿದ್ಯಾಹರೀಶ್ ಬಂಗಾರಕೋಡಿ ಅವರು ಭಾಗವಹಿಸಿ, ದ್ವಿತೀಯ ಸ್ಥಾನ ಪಡೆದು ಬೆಳ್ಳಿಪದಕ ಹಾಗೂ ನಗದು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಡಿ.24ರಂದು ವಿಜಯಪುರದಲ್ಲಿ ಜರುಗಿದ ಹತ್ತು ಕಿ.ಮೀ. ಮ್ಯಾರಥಾನ್ ಸ್ಪರ್ಧೆಯಲ್ಲಿಯೂ ಭಾಗವಹಿಸಿದ ಈಕೆ ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.

ಈಕೆ ಆಲೆಟ್ಟಿ ಗ್ರಾಮದ ರಂಗತ್ತಮಲೆ ಆರ್.ಕೆ. ಕೂಸಪ್ಪ ಗೌಡ ಹಾಗೂ ಶ್ರೀಮತಿ ಸಣ್ಣಮ್ಮ ದಂಪತಿಗಳ ಪುತ್ರಿ. ಪೆರಾಜೆ ಗ್ರಾಮದ ಬಂಗಾರಕೋಡಿ ಹರೀಶ್ ಅವರ ಪತ್ನಿ.