ಮಡಿಕೇರಿಯ ವ್ಯಕ್ತಿ ನಾಪತ್ತೆ

0

ಸುಳ್ಯಕ್ಕೆ ಬಂದಿರುವ ಸಾಧ್ಯತೆ

ಮಡಿಕೇರಿ ತಾಲೂಕು ಬಿಳಿಗೇರಿಯ ಕೃಷ್ಣಪ್ಪ ಬಿ.ಜೆ. (49 ವರ್ಷ) ಎಂಬ ವ್ಯಕ್ತಿ ಕೂಲಿ ಕೆಲಸಕ್ಕೆ ಎಂದು ಹೇಳಿ ಡಿಸೆಂಬರ್ 8 ರಂದು ಹೋದವರು ಮನೆಗೆ ಹಿಂತಿರುಗಿ ಬಂದಿಲ್ಲ ಎಂದು ಕೃಷ್ಣಪ್ಪರ ಪತ್ನಿ ವಸಂತಿ ಎಂಬುವರು ಮಡಿಕೇರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ವ್ಯಕ್ತಿ ಹಿಂದೆ ಸುಳ್ಯ ಕಡೆಗೆ ಹಲವು ಬಾರಿ ಕೂಲಿ ಕೆಲಸಕ್ಕೆ ಬಂದವರಾಗಿದ್ದು, ಸುಳ್ಯ ಆಸುಪಾಸಿನಲ್ಲಿ ಯಾರಾದರೂ ನೋಡಿದರೆ ಸಮೀಪದ ಪೊಲೀಸ್ ಠಾಣೆ ಅಥವಾ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಎಸ್ಐ (Ph: 82272-228777 ಅಥವಾ 9480804946)ಯವರಿಗೆ ಅಥವಾ ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ (08272-229000) ಇವರಿಗೆ ತಿಳಿಸಬೇಕೆಂದು ಮಡಿಕೇರಿ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.