‌ ಜೇಸಿಐ ವಲಯ 15ರ ವಲಯಾಧಿಕಾರಿಯಾಗಿ JFD ಲೋಕೇಶ್ ಆಕ್ರಿಕಟ್ಟೆ ಆಯ್ಕೆ

0

ಜೇಸಿಐ ಮುಂಡ್ಕೂರು ಭಾರ್ಗವ ಆತಿಥ್ಯದಲ್ಲಿ ನಡೆದ ವಲಯ 15ರ 2024 ನೇ ಸಾಲಿನ ಪದಗ್ರಹಣ ಸಮಾರಂಭವು ವಲಯಾದ್ಯಕ್ಷರಾದ ಜೇಸಿಐ ಸೆನೆಟರ್ ಗಿರೀಶ್ ಎಸ್ ಪಿ ಯವರ ಸಭಾಧ್ಯಕ್ಷತೆಯಲ್ಲಿ ಪಡುಬಿದ್ರೆಯ ಬಂಟರ ಭವನದಲ್ಲಿ ಜ.13 ರಂದು ನಡೆಯಿತು.

ಜೇಸಿಐ ಪಂಜ ಪಂಚಶ್ರೀ ಯ ನಿಕಟಪೂರ್ವ ಅಧ್ಯಕ್ಷರಾದ JFD ಲೋಕೇಶ್ ಆಕ್ರಿಕಟ್ಟೆ ಯವರನ್ನು Zone Cordinator for Growth and Development Zone XV Jci India ಕ್ಕೆ ಆಯ್ಕೆಗೊಂಡು ಪ್ರಮಾಣವಚನ ಸ್ವೀಕರಿಸಿದ್ದಾರೆ.

JFDಲೋಕೇಶ್ ಆಕ್ರಿಕಟ್ಟೆ ಯವರ 2023 ರ ಅಧ್ಯಕ್ಷೀಯ ಅವಧಿಯಲ್ಲಿನ ಕೆಲಸ ಕಾರ್ಯಗಳನ್ನು ಗುರುತಿಸಿ ವಲಯಾಧ್ಯಕ್ಷರು ಇವರನ್ನು ಆಯ್ಕೆ ಮಾಡಿರುತ್ತಾರೆ.

ಜೇಸಿಐ ಪಂಜ ಪಂಚಶ್ರೀ ಯ ಸ್ಥಾಪಧ್ಯಕ್ಷ ಜೇಸಿ ದೇವಿಪ್ರಸಾದ್ ಜಾಕೆ, ಅಧ್ಯಕ್ಷ ಜೇಸಿ ಜೀವನ್ ಮಲ್ಕಜೆ, ಪೂರ್ವಾಧ್ಯಕ್ಷ ಜೇಸಿ ಚೇತನ್ ತಂಟೆಪ್ಪಾಡಿ , ಕಾರ್ಯದರ್ಶಿ ಜೇಸಿ ಜೀವನ್ ಶೆಟ್ಟಿಗದ್ದೆ ಹಾಗೂ ಸದಸ್ಯರಾದ ಜೇಸಿ ವಾಚಣ್ಣ ಕೆರೆಮೂಲೆ, ಜೇಸಿ ಅಶ್ವತ್ ಬಾಬ್ಲುಬೆಟ್ಟು, ಜೇಸಿ ಗಗನ್ ಕಿನ್ನಿಕುಮೇರಿ, ಜೇಸಿ ಪ್ರವೀಣ್ ಕುಂಜತ್ತಾಡಿ ಈ ಸಂದರ್ಭದಲ್ಲಿ ಜೊತೆಗಿದ್ದರು.