ದುಗ್ಗಲಡ್ಕ-ಕೊಡಿಯಾಲಬೈಲ್ ರಸ್ತೆಯ ನೀರಬಿದಿರೆಯಲ್ಲಿ ಕಾಂಕ್ರೀಟೀಕರಣಕ್ಕೆ ಚಾಲನೆ

0

ದುಗ್ಗಲಡ್ಕ- ಕೊಡಿಯಾಲಬೈಲ್- ಸುಳ್ಯ ರಸ್ತೆಯ ನೀರಬಿದಿರೆ ಎಂಬಲ್ಲಿ ರಸ್ತೆ ಕಾಂಕ್ರೀಟೀಕರಣಕ್ಕೆ ಜ.18 ರಂದು ಚಾಲನೆ ನೀಡಲಾಗಿದೆ. ಸುಮಾರು 25 ಲಕ್ಷ ವೆಚ್ಚದಲ್ಲಿ 346 ಮೀಟರ್ ಉದ್ದ ಕಾಂಕ್ರೀಟೀಕರಣಗೊಳ್ಳಲಿರುವುದಾಗಿ ತಿಳಿದುಬಂದಿದೆ.

ದುಗ್ಗಲಡ್ಕ ರಾಮ ಮಣಿಯಾಣಿಯವರ ಮನೆಯ ಮೇಲಿನ ರಸ್ತೆಯಿಂದ ಜೆಸಿಬಿ ಮೂಲಕ ಕಾಮಗಾರಿ ಆರಂಭಗೊಂಡಿದೆ. ಮಾಜಿ ಸಚಿವರಾದ ಎಸ್.ಅಂಗಾರರ ಅವಧಿಯಲ್ಲಿ 25 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು, ಜೆಸಿಬಿ ಕೆಲಸ ಕೂಡ ಮಾಡಲಾಗಿತ್ತು.ಚುನಾವಣಾ ಹಿನ್ನೆಲೆಯಲ್ಲಿ ಕಾಮಗಾರಿ ನಡೆದಿರಲಿಲ್ಲ.ಇದೀಗ ಅದೇ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಕಾಮಗಾರಿ ನಡೆಯುತ್ತಿರುವುದಾಗಿ ತಿಳಿದುಬಂದಿದೆ.