ಅಯೋಧ್ಯೆ ಶ್ರೀ ಬಾಲರಾಮನ ಪ್ರತಿಷ್ಠೆಯ ದಿನ ಪದ್ಮನಾಭ ಹರ್ಲಡ್ಕ ರಿಂದ ಅಟೋ ಉಚಿತ ಸೇವೆ

0

ಅಯೋಧ್ಯೆಯಲ್ಲಿ ಶ್ರೀ ಬಾಲರಾಮ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಸಿಹಿತಿಂಡಿ ವಿತರಣೆ, ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಂಡಿದ್ದರೆ,ಸುಳ್ಯದ ಯುವಕರೋರ್ವರು ಉಚಿತ ಅಟೋ ಸೇವೆ ಒದಗಿಸಿ ಗಮನ ಸೆಳೆದಿದ್ದಾರೆ.
ಸುಳ್ಯದಲ್ಲಿ ಅಟೋ ಚಾಲಾಯಿಸುತ್ತಿರುವ, ಹೋಟೆಲ್ ಮಾಲಕರೂ ಆಗಿರುವ ಪದ್ಮನಾಭ ಹರ್ಲಡ್ಕರವರು ಈ ಉಚಿತ ಸೇವೆ ನಡೆಸುತ್ತಿದ್ದಾರೆ.
ಈ ವಿಶೇಷ ದಿನವಾದ ಇಂದು ದಿನಪೂರ್ತಿ ಸುಳ್ಯ ತಾಲೂಕಿನಾದ್ಯಂತ ಉಚಿತ ಅಟೋ ಸೇವೆಯನ್ನು ಒದಗಿಸುತ್ತೇನೆ ಎಂದು ಪದ್ಮನಾಭರು ಹೇಳುತ್ತಾರೆ.