ಆಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ದಾಸನಕಜೆಯಲ್ಲಿ ಕರಸೇವಕರಿಗೆ‌ ಸನ್ಮಾನ – ಭಜನಾ ಕಾರ್ಯಕ್ರಮ

0

ಆಯೋಧ್ಯೆಯಲ್ಲಿ ಶ್ರೀ ರಾಮ ಲಲ್ಲಾ ಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ವಿಶ್ವ ಹಿಂದು ಪರಿಷದ್ ಮತ್ತು ಭಜರಂಗದಳ ಇದರ ವತಿಯಿಂದ ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ದೀನದಯಾಳ್ ಸಭಾಭವನದಲ್ಲಿ ಗಣಪತಿ ಹವನ, ಭಜನಾ ಕಾರ್ಯಕ್ರಮ, ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕರಸೇವಕರಾಗಿ ಸೇವೆ ಸಲ್ಲಿಸಿದ ಮಾಜಿ‌ ಸಚಿವ ಎಸ್. ಅಂಗಾರ, ಗಂಗಾಧರ ಮಾವಿನಗೋಡ್ಲು, ಗಂಗಾಧರ ಕೇಪುಳಕಜೆ, ಮಾಧವ ಗೌಡ ಸುಳ್ಳಿ, ಸೋಮಶೇಖರ ಗುಡ್ಡನಮನೆ, ಯಜ್ಞೇಶ್ವರ ನಾರ್ಣಕಜೆಯವರನ್ನು ಸನ್ಮಾನಿಸಲಾಯಿತು.

ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಅಧ್ಯಕ್ಷ ಧನಂಜಯ ಕುಮಾರ್ ಕೋಟೆಮಲೆ, ಗ್ರಾ.ಪಂ.ಮಾಜಿ ಅಧ್ಯಕ್ಷ ದಿವಾಕರ ನಾಯಕ್ ಎರ್ಮೆಟ್ಟಿ, ಗ್ರಾ.ಪಂ.ಸದಸ್ಯ ರಾಮಚಂದ್ರ ಪ್ರಭು, ಮಾಧವ ದಾಸನಕಜೆ, ಶಿವಕರ ಕಜೆ, ಬೋಜಪ್ಪ ಹರ್ಲಡ್ಕ ರವರು ಸನ್ಮಾನಿಸಿದರು.

ಸನ್ಮಾನಿತರ ಪರವಾಗಿ ಮಾಜಿ ಸಚಿವ ಎಸ್. ಅಂಗಾರ ತಮ್ಮ ಅನುಭವ ಹಂಚಿಕೊಂಡರು.‌

ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಜಿಲ್ಲಾ ಪ್ರಮುಖ್ ಹೇಮಚಂದ್ರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ವಿಶ್ವ ಹಿಂದೂ ಪರಿಷದ್ ತಾಲೂಕು ಅಧ್ಯಕ್ಷ ಹರಿಪ್ರಸಾದ್ ಬಿ.ವಿ. ಸ್ವಾಗತಿಸಿದರು.‌

ಸತೀಶ್ ಗುಡ್ಡನಮನೆ ವಂದಿಸಿದರು.‌

ಕಾರ್ಯಕ್ರಮ ದಲ್ಲಿ‌ ಮಕ್ಕಳು ಶ್ರೀ ರಾಮನ ವೇಷ ಧರಿಸಿ ಸಂಭ್ರಮಿಸಿದರು.

ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.