ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ- ಅರಂಬೂರು ಧರ್ಮಾರಣ್ಯದಲ್ಲಿ ರಾಮ ಕಲ್ಪೋಕ್ತ ಪೂಜೆ,ಭಜನೆ

0

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಅರಂಬೂರಿನ ಧರ್ಮಾರಣ್ಯದಲ್ಲಿ ಶ್ರೀರಾಮ ಕಲ್ಪೋಕ್ತ ಪೂಜೆಯು ಪುರೋಹಿತ ನಾಗರಾಜ ಭಟ್ ರವರ ನೇತ್ರತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಭಜನಾ ಸಂಕೀರ್ತನೆ ಹಾಗೂ ರಾಮ ತಾರಕ ಜಪ ಯಜ್ಞವು ನಡೆಯಿತು.

ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್ ರವರು ಧಾರ್ಮಿಕ ಉಪನ್ಯಾಸ ನೀಡಿದರು. ಸುಳ್ಯ ಹವ್ಯಕ ವಲಯದ ಅಧ್ಯಕ್ಷ ವಿಷ್ಣುಕಿರಣ ಮತ್ತು ಗುರಿಕಾರರು, ಗುರು ಗಣಪತಿ ಭಕ್ತ ಭಜನಾ ಮಂಡಳಿಯ ಪದಾಧಿಕಾರಿಗಳು , ಧರ್ಮಾರಣ್ಯ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆಯಾಯಿತು.