ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಮುಖ್ಯ ವಿಮಾ ಸಲಹೆಗಾರ ಸುಜಿತ್ ರೈ ಪಟ್ಟೆರವರಿಗೆ ಗೌರವಾರ್ಪಣೆ

0

ಜ. 18ರಂದು ಮಂಗಳೂರಿನ ಮೋತಿ ಮಹಲ್ ಸಭಾಭವನದಲ್ಲಿ ನಡೆದ ಯುನೈಟೆಡ್ ಇಂಡಿಯಾದ ಸ್ಟಾರ್ ಅಡ್ವೈಸರ್ಸ್ ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ವಾರ್ಷಿಕ ವರ್ಷದಲ್ಲಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಕೆ.ಎಸ್. ರಾವ್ ಮಂಗಳೂರು ಶಾಖೆಯ ಮುಖ್ಯ ವಿಮಾ ಸಲಹೆಗಾರರಾದ ಸುಜಿತ್ ರೈ ಪಟ್ಟೆಯವರನ್ನು ಉತ್ತಮ ಸಾಧನೆಗಾಗಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಬೆಂಗಳೂರು ಪ್ರಾಂತ್ಯದ ಡಿಜಿಎಂ ಕೆ. ರಾಜೇಶ್ವರಿ, ಆರ್ ಎಂ ವೈ.ವಿ. ರಮಣ, ಮಂಗಳೂರಿನ ಎಸ್ ಡಿ ಎಂ ಪುಂಡಲಿಕ ನಾಯ್ಕ್ , ಕೆ.ಎಸ್. ರಾವ್ ಶಾಖೆಯ ಮ್ಯಾನೇಜರ್ ಅಭಿಮನ್ಯು ಸೂದ್ ರವರು ಗೌರವಿಸಿದರು.

ಬೆಳ್ಳಾರೆಯ ಮೇಲಿನ ಪೇಟೆಯಲ್ಲಿರುವ ಸುಳ್ಳಿ ಕಾಂಪ್ಲೆಕ್ಸ್ ನಲ್ಲಿ ಕಳೆದ 10 ವರ್ಷಗಳಿಂದ ಯುನೈಟೆಡ್ ಇಂಡಿಯಾದ ಪೋರ್ಟಲ್ ಕಚೇರಿಯ ಮೂಲಕ ಸಾರ್ವಜನಿಕರಿಗೆ ವಾಹನ ಇನ್ಶೂರೆನ್ಸ್ ವಿಭಾಗದಲ್ಲಿ ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ.