ಮೇನಾಲದಲ್ಲಿ ಧರ್ಮರಸು ಇರ್ವೇರು ಉಳ್ಳಾಕುಲು ದೈವ ಮತ್ತು ಪರಿವಾರ ದೈವಗಳ ನೇಮೋತ್ಸವ

0

ಅಜ್ಜಾವರ ಗ್ರಾಮದ ಮೇನಾಲ ಗ್ರಾಮ ದೈವ ಮೇನಾಲ ಉಳ್ಳಾಕುಲು ಮಾಡ ಚಾವಡಿ ಪರಿವಾರ ಮತ್ತು ನಾಗದೇವರು ಇಲ್ಲಿ ಶ್ರೀ ಧರ್ಮರಸು ಇರ್ವೇರು ಉಳ್ಳಾಕುಲು ದೈವ ಮತ್ತು ಪರಿವಾರ ದೈವಗಳ ನೇಮೋತ್ಸವವು ಮೇದಿನಡ್ಕದಲ್ಲಿ ಫೆ.೧ ಆರಂಭಗೊಂಡು, ೨ರಂದು ನಡೆಯುವುದು.

ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ನೇಮೋತ್ಸವ ನಡೆಯಲಿದ್ದು, ಫೆ.೧ರಂದು ಬೆಳಗ್ಗೆ ನಾಗತಂಬಿಲ ಮೇದಿನಡ್ಕದಲ್ಲಿ ನಡೆಯಿತು. ಬಳಿಕ ಶ್ರೀ ಉಳ್ಳಾಕುಲು ಚಾವಡಿಯಲ್ಲಿ ಗಣಪತಿ ಹವನ, ಶುದ್ಧಿ ಕಲಶ ಮತ್ತು ದೈವಗಳಿಗೆ ತಂಬಿಲ. ಬೆಳಗ್ಗೆ ೧೧ ಗಂಟೆಗೆ ಮೇದಿನಡ್ಕದಲ್ಲಿ ಉಗ್ರಾಣ ತುಂಬಿಸಲಾಯಿತು. ಸಂಜೆ ಮೇನಾಲ ಉಳ್ಳಾಕುಲ ಚಾವಡಿಯಿಂದ ಭಂಡಾರ ತೆಗೆದು ದೈಯರ ಮಂಟಪ, ರುದ್ರಚಾಮುಂಡಿ ಕಟ್ಟೆ, ಉಳ್ಳಾಕುಲ ಮಾಡಕ್ಕೆ ಹೋಗಿ ಮೇದಿನಡ್ಕ (ಕೊಡಿಯಡಿ) ದೈವ ನಡೆಯುವ ಸ್ಥಳಕ್ಕೆ ಬಂದು, ರಾತ್ರಿ ಮೇದಿನಡ್ಕದಲ್ಲಿ ಅನ್ನಸಂತರ್ಪಣೆ ನಡೆಯಿತು.

ಫೆ.೨ರಂದು ಮೇದಿನಡ್ಕದಲ್ಲಿ ಮುಂಜಾನೆ ಇರ್ವೆರು ಉಳ್ಳಾಕುಲು ದೈವದ ನೇಮ ಆರಂಭವಾಗಿ, ಪ್ರಸಾದ ವಿತರಣೆ ನಡೆಯಿತು.

ಬೆಳಗ್ಗೆ ೧೦ ಗಂಟೆಯಿಂದ ನಾಯರ್ ದೈವ ಮತ್ತು ಪುರುಷ ದೈವ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ. ಮಧ್ಯಾಹ್ನ ರುದ್ರಚಾಮುಂಡಿ ದೈವದ ನೇಮೋತ್ಸವ ನಡೆಯುವುದು. ಪ್ರಸಾದ ವಿತರಣೆ ಬಳಿಕ ವರ್ಣರ ಪಂಜುರ್ಲಿ ದೈವದ ನೇಮೋತ್ಸವ. ಸಾಯಂಕಾಲ ಮೇದಿನಡ್ಕದಿಂದ ಉಳ್ಳಾಕುಲು ಚಾವಡಿಗೆ ಭಂಡಾರ ತರಲಾಗುವುದು.