ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪಿ.ಕೆ‌.ಶಶಿಕಲ ನಿವೃತ್ತಿ

0

ವಾಮದಪದವುನಲ್ಲಿ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಪಿ‌.ಕೆ.ಶಶಿಕಲ ಜ.31ರಂದು ನಿವೃತ್ತಿ ಹೊಂದಿದ್ದಾರೆ.ಬೈಲಹೊಂಗಲ ತಾಲೂಕಿನ ಬೆಳವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಕಾರಿ ಸೇವೆಯನ್ನು ಆರಂಭಿಸಿ, ಸುಳ್ಯ ,ವಿಟ್ಲ ಹಾಗೂ ವಾಮದಪದವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುಮಾರು 38 ವರ್ಷಗಳ ಕಾಲ ಸೇವೆ ಸಲ್ಲಿಸಿ,ಜ.31ರಂದು ನಿವೃತ್ತರಾಗಿದ್ದಾರೆ.

ಇವರು ಮೂಲತಃ ಮರ್ಕಂಜ ಗ್ರಾಮದ ಕುದ್ಕುಳಿಯವರು. ಪತಿ ಈಶ್ವರಪ್ಪ ಗೌಡ ಕುದ್ಕುಳಿ, ಪುತ್ರ ಡಾ. ಜಗದೀಶ್ ಕುದ್ಕುಳಿಯವರು ಕೊಚ್ಚಿ ಕರ್ಕಿನೆಸ್ ಹೆಲ್ತ್ ಕೇರ್ ನಲ್ಲಿ ರಿಸರ್ಚ್ ಎಕ್ಸಿಕ್ಯುಟಿವ್ ಆಗಿದ್ದಾರೆ.ಇನ್ನೋರ್ವ ಪುತ್ರ ಕಾರ್ತಿಕ್ ಕುದ್ಕುಳಿ ಬೆಂಗಳೂರಿನ ಜೈನ್ ಯುನಿವರ್ಸಿಟಿ ಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾರೆ.ಪ್ರಸ್ತುತ ವಿಟ್ಲದ ಅಳಿಕೆ ಗ್ರಾಮದ ದರ್ಬೆ ಎಂಬಲ್ಲಿ ನೆಲೆಸಿದ್ದಾರೆ.