ಅಯ್ಯನಕಟ್ಟೆ: ಶಿಶಿರ ಎಂಟರ್ಪ್ರೈಸಸ್ ಸ್ಥಳಾಂತರಗೊಂಡು ಶುಭಾರಂಭ

0

ಬೆಳ್ಳಾರೆಯ ಮಾಸ್ತಿಕಟ್ಟೆ ಬಳಿಯ ಶ್ರೀಕೃಷ್ಣ ಆರ್ಕೀಡ್ ನಲ್ಲಿದ್ದ ಜಿನಸು, ಗೃಹೋಪಯೋಗಿ ಸಾಮಾಗ್ರಿಗಳ ಮಳಿಗೆ ಶಿಶಿರ ಎಂಟರ್ಪ್ರೈಸಸ್ ಸ್ಥಳಾಂತರಗೊಂಡು ಅಯ್ಯನಕಟ್ಟೆಯ ಗೋಕುಲ ಕಾಂಪ್ಲೆಕ್ಸ್ ನಲ್ಲಿ ಫೆ. 15ರಂದು ಶುಭಾರಂಭಗೊಂಡಿತು. ಗೋಕುಲ ಕಾಂಪ್ಲೆಕ್ಸ್ ಮಾಲಕರಾದ ರಾಮಚಂದ್ರ ರಾವ್ ಬಾಳಿಲ ಶಿಶಿರ ಎಂಟರ್ಪ್ರೈಸಸ್ ನ್ನು ಉದ್ಘಾಟಿಸಿದರು. ಸಂಸ್ಥೆಯ ಪಾಲುದಾರರಾದ ಸದಾಶಿವ ನಾಯಕ್ ಪಂಜಿಗಾರು ಮತ್ತು ಕಾರ್ತಿಕ್ ಪದ್ಯಾಣ ಅತಿಥಿಗಳನ್ನು ಸ್ವಾಗತಿಸಿ, ಕಾರ್ತಿಕ್ ಪದ್ಯಾಣ ಪ್ರಸ್ತಾವಿಕ ಮಾತುಗಳನ್ನಾಡಿದರು. ಮಾಲಕರ ಕುಟುಂಬಸ್ಥರು, ಬಂಧುಗಳು, ಗ್ರಾಹಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಶಿರ ಎಂಟರ್ಪ್ರೈಸಸ್ ನಲ್ಲಿ ಜಿನಸು ಸಾಮಾಗ್ರಿಗಳು, ಪ್ಲಾಸ್ಟಿಕ್ ಸಾಮಾಗ್ರಿಗಳು ಸೇರಿದಂತೆ ಎಲ್ಲಾ ರೀತಿಯ ಗೃಹೋಪಯೋಗಿ ಸಾಮಾಗ್ರಿಗಳು ಲಭ್ಯವಿರುವುದಾಗಿ ಮಾಲಕರು ತಿಳಿಸಿದ್ದಾರೆ.