ಸುಳ್ಯ ನಗರ ಪಂಚಾಯತಿನಲ್ಲಿ ಪುಲ್ವಾಮಾ ದಾಳಿಯ ಹುತಾತ್ಮರಿಗೆ ಪುಷ್ಪ ನಮನ ಸಮರ್ಪಣೆ

0

2019ರ ಫೆಬ್ರವರಿ 14ರಂದು ಪುಲ್ವಾಮಾ ಜಿಲ್ಲೆಯ ಅವಂತಿ ಪಾರದಲ್ಲಿ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ 40 ಜನ ಸಿಆರ್ಪಿಎಫ್ ಯೋಧರಿಗೆ ಗೌರವ ನಮನ ಸಲ್ಲಿಸುವ ಕಾರ್ಯಕ್ರಮವು ನಗರ ಪಂಚಾಯತ್ನ ಆವರಣದಲ್ಲಿ ನಿರ್ಮಾಣಗೊಂಡಿರುವ ಯುದ್ಧ ಸ್ಮಾರಕದ ಎದುರು ಭಾಗದಲ್ಲಿ ನಡೆಯಿತು.

ನಗರ ಪಂಚಾಯಿತಿ ನ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರು ಪುಲ್ವಾಮಾ ಹತ್ಯಾಕಾಂಡದ ಘಟನೆಗಳನ್ನು ನೆನಪಿಸಿಕೊಂಡು ಭಯೋತ್ಪಾದನೆಯನ್ನು ಮಟ್ಟ ಹಾಕಲು ನಾವೆಲ್ಲರೂ ಒಂದಾಗಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು. ನಗರ ಪಂಚಾಯತ್ನ ಸದಸ್ಯರುಗಳಾದ ಎಂ ವೆಂಕಪ್ಪಗೌಡ, ಕೆ ಸುಧಾಕರ್, ಶರೀಫ್ ಕಂಠಿ, ಶೀಲಾ ಅರುಣ್ ಕುರುಂಜಿ , ಶಶಿಕಲಾ ಎನ್, ಪೂಜಿತ ಕೆ.ಯು, ಶಿಲ್ಪಾ ಸುದೇವ್, ನಗರ ಪಂಚಾಯತ್ ನ ಎಲ್ಲಾ ಸಿಬ್ಬಂದಿಗಳು, ಸಾರ್ವಜನಿಕರಾದ ಎ ಎಂ ಭಟ್ , ಸುಭೋದ ಶೆಟ್ಟಿ ಕುಸುಮಾಧರ ಎಟಿ, ನ್ಯಾಯವದಿಗಳಾದ ಜಗದೀಶ್ ಡಿಪಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದ್ದ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಎಲ್ಲರೂ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು