ಎಸ್.ಕೆ.ಎಸ್‌.ಎಸ್.ಎಫ್. ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಉಪಾಧ್ಯಕ್ಷರಾಗಿ ಜಮಾಲ್ ಬೆಳ್ಳಾರೆ

0

ಎಸ್.ಕೆ.ಎಸ್‌.ಎಸ್.ಎಫ್. ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಗೆ ಉಪಾಧ್ಯಕ್ಷರಾಗಿ ಎರಡನೇ ಬಾರಿಗೆ ಕೆ ಎಸ್ ಜಮಾಲ್ ಬೆಳ್ಳಾರೆ ಆಯ್ಕೆಯಾಗಿದ್ದಾರೆ. ಸಮಾಜ ಸೇವಾ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಇವರು ಎಸ್ ಕೆ ಎಸ್‌ ಎಸ್ ಎಫ್ ವಲಯ ಅಧ್ಯಕ್ಷರಾಗಿ, ಸುಳ್ಯ ಝೋನ್ ಅಧ್ಯಕ್ಷರಾಗಿ, ಬೆಳ್ಳಾರೆ ಕ್ಲಸ್ಟರ್ ಅಧ್ಯಕ್ಷರಾಗಿ, ವಿಖಾಯ ಚೇರ್ಮನ್ ಆಗಿ ಸೇವೆಯನ್ನು ಸಲ್ಲಿಸಿದ್ದಾರೆ.
ಸಂಶುಲ್ ಉಲಾಮ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿ ಆಗಿರುವ ಇವರು ಪ್ರಸ್ತುತ ಪೆರುವಾಜೆ ಮುನೀರುಲ್ ಇಸ್ಲಾಂ ಮದರಸದ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
ಇವರು ಬೆಳ್ಳಾರೆ ನಿವಾಸಿ ದಿ. ಸಾಬು ಹಾಜಿ ಹಾಗೂ ಖತೀಜಮ್ಮ ದಂಪತಿಯ ಪುತ್ರ.