ಕಲ್ಮಕಾರು ಶಾಲೆಗೆ ಮೇಜು ಹಸ್ತಾಂತರ

0

           ಬ್ಯಾಂಕ್ ಆಫ್ ಬರೋಡ ಸುಬ್ರಹ್ಮಣ್ಯ ಶಾಖಾ ವತಿಯಿಂದ ಸಿ.ಎಸ್.ಆರ್ ಪಂಡಿನನಿಂದ ಕೊಡ ಮಾಡಿದ ೧೦,೦೦೦ ಮೌಲ್ಯದ ಮೇಜುನ್ನು ಸುಬ್ರಹ್ಮಣ್ಯ ಶಾಖಾ ಪ್ರಬಂಧಕರಾದ ಕೃಷ್ಣ ಪ್ರಸಾದ್ ಭಟ್ ಇವರು ಫೆ.28 ರಂದು ಶಾಲಾ ಮುಖ್ಯ ಗುರುಗಳಾದ ಮಾಲಿನಿ ಕೆಎಸ್ ಇವರಿಗೆ ಕಲ್ಮಕಾರು  ಶಾಲೆಯಲ್ಲಿ  ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ಪ್ರಬಂಧಕರಾದ ಕೃಷ್ಣ ಪ್ರಸಾದ್ ಭಟ್ ಇವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಬ್ಯಾಂಕ್‌ನ ಶಾಖಾ ಸಿಬ್ಬಂದಿಗಳಾದ ಆಕಾಶ್,ವೆಂಕಪ್ಪ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶಿವಾನಂದ ಬಿಳಿಮಲೆ ಹಾಗೂ ಸಮಿತಿ ಸದಸ್ಯರು, ಶಾಲಾ ಗೌರವ ಶಿಕ್ಷಕಿಯರಾದ ಸುಕನ್ಯಾ, ಚಿರಶ್ರೀ, ಜ್ಯೋತಿ ಮತ್ತು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರುಗಳಾದ ಮಾಲಿನಿ ಕೆಎಸ್ ಸ್ವಾಗತಿಸಿ, ವಂದಿಸಿದರು.