ಐವರ್ನಾಡು : ಕೇಬಲ್ ಕಳವು,ಜೀವ ಬೆದರಿಕೆ ಪೊಲೀಸ್ ದೂರು – ಪ್ರಕರಣ ದಾಖಲು

0

ಐವರ್ನಾಡಿನಲ್ಲಿ ತೋಟದಿಂದ ಕೇಬಲ್ ಕಳವು ಮಾಡಿದ್ದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಪೊಲೀಸ್ ದೂರು ನೀಡಿದ್ದು ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.

ಅಪೂರ್ವ ಎಂಬವರು ಪೊಲೀಸು ದೂರು ನೀಡಿದ್ದು ದೂರಿನಲ್ಲಿ ಫೆ.1 ರಂದು ಬೆಳಿಗ್ಗೆ, ನಾನು ಹಾಗೂ ಗಂಡ, ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಆರಿಕಲ್ಲು ಎಂಬಲ್ಲಿರುವ ತಮ್ಮ ಅಡಿಕೆ ತೋಟಕ್ಕೆ ನೀರು ಹಾಯಿಸಲು ಹೋದ ಸಮಯ, ಚಂದ್ರಶೇಖರ ಹಾಗೂ ಕುಸುಮಾಧರ ಎಂಬವರುಗಳು, ನಮ್ಮ ಜಮೀನಿಗೆ ಅಕ್ರಮ ಪ್ರವೇಶಿಸಿ, ಪಂಪ್ ಶೆಡ್ ನಿಂದ ಬೋ‌ವೆಲ್ ಗೆ ಹಾಕಿರುವ ಕೇಬಲ್ ಗಳನ್ನು ತೆಗೆದು ಹಾಕಿರುತ್ತಾರೆ. ಬಳಿಕ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿದ್ದು ಅಂದಾಜು 120 ಮೀಟರ್ ವಿದ್ಯುತ್ ಕೇಬಲ್ ಅನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವು ಮಾಡಿಕೊಂಡು ಹೋದ ವಿದ್ಯುತ್ ಕೇಬಲ್ ಅಂದಾಜು ಮೌಲ್ಯ ರೂ 9000/- ಅಗಬಹುದು ಎಂಬುದಾಗಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.