ಮುರುಳ್ಯ : ಅಲೆಕ್ಕಾಡಿಯಲ್ಲಿ ಶಾಸಕರಿಂದ ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿ ಪೂಜೆ

0

ಅಲೆಕ್ಕಾಡಿಯಿಂದ ನಾಗನಕಜೆ ಸಂಪರ್ಕ ರಸ್ತೆ ಹದಗೆಟ್ಟಿದ್ದು ಶಾಸಕರ ಅನುದಾನದಿಂದ 2.5ಲಕ್ಷ ಒದಗಿಸಿದ್ದು ಮಾರ್ಚ್ 9 ರಂದು ಶಾಸಕರಿಂದ ಭಾಗಿರಥಿ ಮುರುಳ್ಯರವರು ತೆಂಗಿನಕಾಯಿ ಒಡೆದು ಗುದ್ದಲಿ ಪೂಜೆ ನೆರವೇರಿಸಿದರು , ಕೇರ್ಪಡ ಪಲ್ಲತಡ್ಕ ಮೊಗೇರ್ಕಳ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಕೆ. ರವರು ದೀಪ ಪ್ರಜ್ವಲನೆ ಮಾಡಿದರು. ಸವಣೂರು ಬಿಜೆಪಿ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಲೆಕ್ಕಿ ಸಿರಿ ಮಜಲು, 3ನೇ ವಾರ್ಡ್ ಬೂತ್ ಅಧ್ಯಕ್ಷ ಯತೀಶ್ ನಾಗನಕಜೆ, ಕಾರ್ಯದರ್ಶಿ ಅನುರಾಜ್ ಬಿ. ಸಿ , ಎಡಮಂಗಲ ಪಂಚಾಯತ್ ಸದಸ್ಯ ನವೀನ್ ಕುಮಾರ್ ಕರಿಂಬಿಲ ಪಂಚಾಯತ್ ಸಿಬ್ಬಂದಿ ದೇವಿಪ್ರಸಾದ್ ಕೇರ್ಪಡ , ನಿವೃತ್ತ ಮುಖ್ಯ ಶಿಕ್ಷಕ ಸೀತಾರಾಮ ಗೌಡ ಎಂ.ಬಿ , ಸುಂದರ ಗೌಡ ಆಲಾಜೆ, ಧನುಷ್ ನಾವೂರು , ನಾರಾಯಣ ಪುರೋಹಿತರಲ್ಲದೆ, ರಸ್ತೆ ಫಲಾನುಭವಿಗಳು ಉಪಸ್ಥಿತರಿದ್ದರು.