ಶ್ರೀಮತಿ ಯಶೋದ ಎಂ.ಬಿ.ಯವರಿಗೆ ಡಾಕ್ಟರೇಟ್ ಪದವಿ

0

ಮಂಡೆಕೋಲು ಗ್ರಾಮದ ಬೊಳುಗಲ್ಲು ಶ್ರೀಮತಿ ವಿಜಯಲಕ್ಷ್ಮಿ – ಎಂ.ಬಾಲಕೃಷ್ಣ ನಾಯಕ್ ದಂಪತಿಗಳ ಪುತ್ರಿ, ಬೆಂಗಳೂರಿನ ಕ್ರಿಸ್ತು ಜಯಂತಿ ‌ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಶ್ರೀಮತಿ ಯಶೋದ ಎಂ.ಬಿ.ಯವರ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಇವರು “Bio-inspired Algorithm for Cooperative Device-to-Device Communication in Internet of Things” ಎಂಬ ವಿಷಯದ ಕುರಿತು ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ವೃಂದಾ ಶಿವಶೆಟ್ಟಿಯವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.

ಮಾ.7ರಂದು ಬೆಳಗಾವಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ಯಶೋದ ಎಂ.ಬಿ.ಯವರಿಗೆ ಪದವಿ ಪ್ರದಾನ ನಡೆಯಿತು.

ಇವರು ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಕೃಷ್ಣಮೂರ್ತಿ ಎ. ಇವರ ಪತ್ನಿ.