ಮೇನಾಲ ಶಾಲಾ ನೂತನ ಕೊಠಡಿ ಉದ್ಘಾಟನೆ

0

ಅಜ್ಜಾವರ ಗ್ರಾಮದ ಮೇನಾಲ ಶಾಲಾ ನೂತನ ಕೊಠಡಿ ಉದ್ಘಾಟನೆ ಮಾ.10ರಂದು‌ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿದರು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಬಿ.ಇ.ಒ. ರಮೇಶ್ ಬಿ.ಇ., ಮುಖ್ಯ ಶಿಕ್ಷಕಿ ಕನಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸೌಕತ್ ಅಲಿ, ಅಜ್ಜಾವರ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ, ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ ವಿಷ್ಣು ಯುವಕ ಮಂಡಲ ಅಧ್ಯಕ್ಷ ರಂಜಿತ್ ರೈ ಮೇನಾಲ, ಸುಭೋದ್ ಶೆಟ್ಟಿ ಮೇನಾಲ, ಪಂಚಾಯತ್ ಮಾಜಿ ಸದಸ್ಯ ಶ್ರೀಧರ ಮೇನಾಲ, ಪ್ರಮುಖರಾದ ಧನಂಜಯ ಅಡ್ಪಂಗಾಯ, ಪಿ.ಸಿ.ಜಯರಾಮ, ಟಿ.ಎಂ. ಶಹೀದ್, ರವೀಂದ್ರನಾಥ ರೈ ಮೇನಾಲ, ಪಂಚಾಯತ್ ಸದಸ್ಯರು ಮೊದಲಾದವರಿದ್ದರು.

ನೂತನ ಶೌಚಾಲಯ ಕೊಠಡಿಯನ್ನು ಪಂಚಾಯತ್ ಉಪಾಧ್ಯಕ್ಷ ಜಯರಾಮ ಅತ್ಯಡ್ಕ‌ಉದ್ಘಾಟಿಸಿದರು.

ಮೇನಾಲ ಶಾಲಾ ಉದ್ಘಾಟನೆಗೆ ಇತ್ತೀಚೆಗೆ ದಿನ ನಿಗದಿ ಮಾಡಲಾಗಿತ್ತು. ಅದರೆ ಶಾಸಕರು ಉದ್ಘಾಟನೆ ಮುಂದೂಡಲು ಹೇಳಿದ್ದರಿಂದ ಅಂದಿನ ಕಾರ್ಯಕ್ರಮ ರದ್ದುಗೊಂಡಿದ್ದು, ಇದೀಗ ಜಿಲ್ಲಾ ಉಸ್ತುವಾರಿ ಸಚಿವರು ಕೊಠಡಿಯನ್ನು ಉದ್ಘಾಟನೆ ‌ಮಾಡಿದ್ದಾರೆ.