ಕಲ್ಮಕಾರು : ಬಾಳೆಬೈಲು ರಸ್ತೆ ಸಂಪರ್ಕಕ್ಕೆ ಚಾಲನೆ

0

ಮಾನವೀಯತೆ ಮೆರೆದು ರಸ್ತೆಗೆ ಸ್ಥಳದಾನ

ಸುಮಾರು ೪೬ ವರ್ಷಗಳಿಂದ ಬಾಳೆಬೈಲು ರಸ್ತೆ ಸಂಪರ್ಕವು ಇತ್ಯರ್ಥ ಆಗದೆ, ಆ ಭಾಗದ ಜನ ತುರ್ತು ಆರೋಗ್ಯ ಚಿಕಿತ್ಸೆಯ ಪರಿಸ್ಥಿತಿಯ ಸಮಯದಲ್ಲಿ ಆಸ್ಪತ್ರೆಗೆ ತಲುಪದೆ ಅನೇಕ ಬಾರಿ ಬೈಲಸ್ತರು ಸಂಕಷ್ಟದ ಒಳಗಾಗಿದ್ದರು.

ಇದೀಗ ಯಶವಂತ ಬಿಳಿಮಲೆ , ಶ್ರೀಮತಿ ಹೇಮಾವತಿ ಪಡ್ಪು ,ಉಮೇಶ್ ಕಾಟೂರು ಇವರು ಮಾನವೀಯತೆ ಮೆರೆದು ರಸ್ತೆ ಸಂಪರ್ಕಕ್ಕೆ ಸ್ಥಳ ನೀಡಿ ಸಹಕರಿಸಿದ್ದಾರೆ.
ಹಾಗೂ ಗ್ರಾಮ.ಪಂ. ಉಪಾಧ್ಯಕ್ಷ ಅಶ್ವಥ್ ಯಾಳದಾಳು, ಡ್ಯಾನಿ ಯಾಳದಾಳು ,ಧರ್ಮರಾಜ್ ಕೆ.ಪಿ , ಗ್ರಾ.ಪಂ ಸದಸ್ಯ ಪುಷ್ಪರಾಜ್ ಪಡ್ಪು,ಬೈಲಸ್ತರ ಸಹಕಾರದೊಂದಿಗೆ ರಸ್ತೆ ಸಂಪರ್ಕಕ್ಕೆ ಸಂಪೂರ್ಣ ಮುತುವರ್ಜಿ ವಹಿಸಿ ಮಾ. ೧೦ ರಂದು ರಸ್ತೆ ಸಂಪರ್ಕಕ್ಕೆ ಚಾಲನೆಯನ್ನು ನೀಡಿದರು.