ಬಸವನಪಾದೆ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ

0

ಅಜ್ಜಾವರ ಗ್ರಾಮದ ಕಾಂತಮಂಗಲದಿಂದ ಮುಳ್ಯ ಮತ್ತು ದೊಡ್ಡೇರಿ ರಸ್ತೆಯ ಬಸವನಪಾದೆ ಎಂಬಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದ ಮಂಜೂರುಗೊಂಡಿದ್ದು ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ಆನಂದರಾವ್ ಕಾಂತಮಂಗಲ, ಬಿಜೆಪಿ ಮಂಡಲ ಸಮಿತಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಸಿ.ಎ.ಬ್ಯಾಂಕ್ ನಿರ್ದೇಶಕರುಗಳಾದ ಪ್ರಬೋದ್ ಶೆಟ್ಟಿ ಮೇನಾಲ, ವಾಸುದೇವ ಪುತ್ತಿಲ, ಚಂದ್ರಶೇಖರ ದೊಡ್ಡೇರಿ, ದಯಾನಂದ ದೊಡ್ಡೇರಿ, ರವಿಕುಮಾರ್ ದೊಡ್ಡೇರಿ, ಸುಧಾಮ ನಿತೀಶ್, ಗುರುದತ್ ನಾಯಕ್, ದೇವಿಪ್ರಸಾದ್ ಅತ್ಯಾಡಿ, ನವೀನ್ ಮುಳ್ಯ‌,ಮಹೇಶ್ ರೈ ಮೇನಾಲ, ಹರ್ಷಿತ್ ದೊಡ್ಡೇರಿ ಮೊದಲಾದವರಿದ್ದರು.