ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಅಭಿನವ- 2024

0

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಅಭಿನವ- 2024 ” Pursuit for enlightenment –  CME ನೆರವೇರಿಸಲಾಯಿತು. ಸಂಹಿತ ಸಿದ್ಧಾಂತ ಮತ್ತು ಶಲ್ಯ ತಂತ್ರ ವಿಭಾಗದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಉದ್ಘಾಟನಾ ವೇದಿಕೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ, ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ ಡಿ.ವಿ, ಶಲ್ಯ ತಂತ್ರ ವಿಭಾಗದ ಮುಖ್ಯಸ್ಥರಾದ ಡಾ. ಹರ್ಷವರ್ಧನ ಕೆ, ಸುಖಾಯು ಕ್ಯಾನ್ಸರ್ ಫೌಂಡೇಷನ್, ಉಡುಪಿ ಇದರ ಸಂಸ್ಥಾಪಕರಾದ ಡಾ. ಅಶ್ವಥ್ ರಾವ್, ಸಂಹಿತ ಸಿದ್ಧಾಂತ ವಿಭಾಗದ ಮುಖ್ಯಸ್ಥರಾದ ಡಾ. ರಾಘವೇಂದ್ರ ಉಡುಪ ಹಾಗು ಕಾರ್ಯಕ್ರಮದ ಸಂಯೋಜಕರಾದ ಡಾ. ಶ್ರೀರಾಮ್ ಎಂ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಡಾ. ಕೆ ವಿ ಚಿದಾನಂದ ಹಾಗೂ ಇತರ ಗಣ್ಯರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಡಾ. ಅಶ್ವಥ್ ರಾವ್ ರವರು Integrated Medicine – Role of Ayurveda in clinical management ವಿಷಯದ ಬಗ್ಗೆ, ಡಾ. ರಾಘವೇಂದ್ರ ಉಡುಪರವರು Traditional practice of fracture and dislocation ವಿಷಯದ ಬಗ್ಗೆ ವಿಧ್ಯಾರ್ಥಿಗಳಿಗೆ ಭೋದಿಸಿದರು. ಕಾರ್ಯಕ್ರಮವನ್ನು ಸಂಯೋಜನಾಧಿಕಾರಿಯಾದ ಡಾ. ಹರ್ಷವರ್ಧನ ಕೆ ಸ್ವಾಗತಿಸಿ, ಡಾ. ಶ್ರೀರಾಮ್ ಎಂ ಇವರು ವಂದಿಸಿದರು. ವಿದ್ಯಾರ್ಥಿಗಳಾದ ಕು. ದೀಕ್ಷಾ ಹಾಗೂ ಕು. ದೀಪ್ತಿ ಕಾರ್ಯಕ್ರಮವನ್ನು ನಿರೂಪಿಸಿ, ಅಕ್ಷಯ ನಾರಾಯಣ ಪ್ರಾರ್ಥಿಸಿದರು.