ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲದ ಪ್ರಯುಕ್ತ ಶ್ರಮದಾನ

0

ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲದ ಪ್ರಯುಕ್ತ ಭಕ್ತಾದಿಗಳಿಂದ ಶ್ರಮದಾನವು ಮಾ.24ರಂದು ನಡೆಯಿತು.

ಈ ಸಂದರ್ಭದಲ್ಲಿ ಸಮಿತಿಯ
ಅಧ್ಯಕ್ಷ ಕೆ. ಆರ್ ಜಗದೀಶ್ ರೈ, ಕೋಶಾಧಿಕಾರಿ ಬಿ. ಆರ್ . ಪದ್ಮಯ್ಯ , ಕಾರ್ಯದರ್ಶಿ ಕೆ. ವಿ. ಮಂಜುನಾಥ್, ಗೌರವ ಸಲಹೆಗಾರರಾದ ಎಂ..ಎಂ. ಶ್ರೀಧರ ಮಾದೇಪಾಲ , ಎಸ್. ಪಿ ಲೋಕನಾಥ್ ,ತೀಯ ಸಮಾಜದ ಅಧ್ಯಕ್ಷ ಕೆ. ಕೆ. ಶ್ರೀಧರ
ಕಡೆಪಾಲ, ಊರಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು, ಮತ್ತು ಮಕ್ಕಳು ಪಾಲ್ಗೊಂಡಿದ್ದರು.