ಮಾ.30-31:ಪರಿವಾರ ಕುಟುಂಬದ ತರವಾಡು ದೈವಸ್ಥಾನದಲ್ಲಿ ಶ್ರೀ ದೈವಗಳ ನಡಾವಳಿ

0

ಆಲೆಟ್ಟಿ ಗ್ರಾಮದ ಪರಿವಾರ ಉಳಿಯ ತರವಾಡು ದೈವಸ್ಥಾನದಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ,ಶ್ರೀ ಮಹಾ ವಿಷ್ಣುಮೂರ್ತಿ ಹಾಗೂ ಶ್ರೀ ಧರ್ಮ ದೈವ ಮತ್ತು ಉಪದೈವಗಳ ಧರ್ಮನಡಾವಳಿಯು ಮಾ.30 ಮತ್ತು31ರಂದು ನಡೆಯಲಿರುವುದು.


ಮಾ.30 ರಂದು ಬೆಳಗ್ಗೆ ಶ್ರೀ ವೆಂಕಟರಮಣ ದೇವರ ಹರಿಸೇವೆಯಾಗಲಿರುವುದು.

ಸಂಜೆ ಗಂಟೆ 6.30ಕ್ಕೆ ಅರಂಬೂರು ಕುದ್ಕುಳಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ಆಗಮಿಸಲಿರುವುದು. ರಾತ್ರಿ ತೊಡಂಞಲ್ ,ಬಳಿಕ ಶ್ರೀ ವಿಷ್ಣುಮೂರ್ತಿ ದೈವ ದ ಕುಲ್ಚಾಟವಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಗಲಿರುವುದು.ನಂತರ ಗುರುಕಾರ್ನೋರು, ಸತ್ಯದೇವತೆ, ಪಿಲಿಭೂತ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ದೈವಗಳ ಕೋಲವು ಜರುಗಲಿರುವುದು.

ಮರುದಿನ ಬೆಳಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಹಾಗೂ ರುದ್ರ ಚಾಮುಂಡಿ, ಪಾಷಾಣಮೂರ್ತಿ ದೈವಗಳ ನಡಾವಳಿಯು ನಡೆಯಲಿರುವುದು. ಮಧ್ಯಾಹ್ನ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪರಿವಾರ ಕುಟುಂಬಸ್ಥರ ಪರವಾಗಿ  ಪರಿವಾರ ಉಳಿಯ ಲಕ್ಷ್ಮಣ ಗೌಡ ರವರು ತಿಳಿಸಿದರು.