ಮೊಗರ್ಪಣೆ ಜುಮ್ಮಾ ಮಸೀದಿಯಲ್ಲಿ ಗ್ರ್ಯಾಂಡ್ ಇಪ್ತಾರ್

0

ಪವಿತ್ರ ರಂಜಾನ್ ತಿಂಗಳಲ್ಲಿ ಪ್ರತಿ ವರ್ಷ ಇಪ್ತಾರ್ ಕೂಟ ನಡೆಯುತ್ತಿದ್ದು ಮೊಗರ್ಪಣೆ ಜುಮ್ಮಾ ಮಸೀದಿಯಲ್ಲಿ ವಿವಿಧ ಸಂಘ ಸಂಸ್ಥೆಗಳು,ಜಮಾಯತರು,ಇನ್ನಿತರ ದಾನಿಗಳ ಸಹಕಾರದೊಂದಿಗೆ ಇಪ್ತಾರ್ ಕೂಟ ಕಾರ್ಯಕ್ರಮ ಪ್ರತಿದಿನ ನಡೆಯುತ್ತಿದ್ದೆ.


ಎ6 ಶನಿವಾರದಂದು ಮೊಗರ್ಪಣೆ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಬೃಹತ್ ಇಪ್ತಾರ್ ಕೂಟ ನಡೆಯಿತು.


ಇಪ್ತಾರ್ ಕೂಟದಲ್ಲಿ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ,ಜುಮ್ಮಾ ಮಸೀದಿ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್‌ ಸಮದ್,ನ.ಪಂ ಮಾಜಿ ಅಧ್ಯಕ್ಷ ಸಂಶುದ್ದೀನ್ ಜಮಾಯತ್ ಕಮಿಟಿ ಉಪಾಧ್ಯಕ್ಷ ಉಸ್ಮಾನ್ ಸಿಎಂ,ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಶೀರ್ ಹಾಗೂ ಜಮಾಯತ್ ಸಮಿತಿ ನಿರ್ದೇಶಕರು,ಹಳೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಜಮಾಯತರು ಮತ್ತು ಸಾರ್ವಜನಿಕರು ಬಾಗವಹಿಸಿದರು.

ಸೌಹಾರ್ದ ಮೆರೆದ ಕಿರ್ತನ ಕೇಟರರ್ಸ್
ಸುಳ್ಯ ಹಳೇಗೆಟಿನಲ್ಲಿ ಕೇಟರರ್ಸ್ ಉದ್ಯಮ ನಡೆಸುತ್ತಿದ್ದ ಕಿರ್ತನ ಕೇಟರರ್ಸ್ ವತಿಯಿಂದ ಇಪ್ತಾರ್ ಕೂಟ ಸಿಹಿತಿಂಡಿ ಮತ್ತು ಆಹಾರವನ್ನು ನೀಡಿ ಸೌಹಾರ್ದತೆ ಮೆರೆದರು ಇದೇ ಸಂದರ್ಭದಲ್ಲಿ ಸಮಿತಿಯವರು ಅಭಿನಂದನೆ ಸಲ್ಲಿಸಿದರು.