ಹಾಲೆಮಜಲಿನಲ್ಲಿ ಕಳ್ಳತನವಾದ ಬೈಕ್, ಆರೋಪಿಗಳನ್ನು ಪತ್ತೆ ಮಾಡಿದ ಸುಬ್ರಹ್ಮಣ್ಯ ಪೊಲೀಸರು

0

ಕೆಲವು ದಿನಗಳ ಹಿಂದೆ ಗುತ್ತಿಗಾರಿನ ಹಾಲೆಮಜಲು ವೆಂಕಟೇಶ್ವರ ಸಭಾಭವನದ ಬಳಿ ಇರಿಸಿದ್ದ, ರಂಜಿತ್ ಎಂಬವರಿಗೆ ಸೇರಿದ್ದ KA21K9114 ಬೈಕ್ ಕಳ್ಳತನವಾಗಿತ್ತು.

ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಸುಬ್ರಹ್ಮಣ್ಯ ಪೊಲೀಸರು ಸಿಸಿಟಿವಿ ಹಾಗೂ ಮೊಬೈಲ್‌ ಲೋಕೇಶನ್ ಆಧಾರದಲ್ಲಿ ಹಾಸನ ಮೂಲದ ಚಂದನ್ ಹಾಗೂ ವರದರಾಜ್ ಎಂಬುವವರನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಆರೋಪಿಗಳು ಕದ್ದಿರುವ ಬೈಕನ್ನು ಮಡಿಕೇರಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಒ್ಪಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದು ಬಂದಿದೆ.