ಪೆರಾಜೆ ಶ್ರೀ ಶಾಸ್ತಾವು ದೇವರ ಜಾತ್ರೋತ್ಸವ ಸಂಪನ್ನ – ಸನ್ನಿಧಿಯಲ್ಲಿ ಭಕ್ತಾದಿಗಳಿಂದ ಸ್ವಚ್ಛತಾ ಕಾರ್ಯ

0

ಪೆರಾಜೆ ಶ್ರೀ ಶಾಸ್ತಾವು ದೇವರ ಸನ್ನಿಧಿಯಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದ ದೇವರ ಕಾಲಾವಧಿ ಜಾತ್ರೋತ್ಸವವು ವಿಷ್ಣುಮೂರ್ತಿ ದೈವದ ಒತ್ತೆಕೋಲದೊಂದಿಗೆ ಸಂಪನ್ನಗೊಂಡಿದ್ದು, ಎ.11ರಂದು ಭಕ್ತಾದಿಗಳು ಸೇರಿ ದೇವಳದಲ್ಲಿ ಶ್ರಮದಾನ ನಡೆಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು ಸೇರಿದಂತೆ ದೇವಾಲಯದ ಪದಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದು, ಶ್ರಮದಾ‌ನದಲ್ಲಿ ಭಾಗವಹಿಸಿದರು‌‌.