ಕನಕಮಜಲು: ಬಿಜೆಪಿ ವತಿಯಿಂದ ಚಾವಡಿ ಸಭೆ ಹಾಗೂ ಮನೆಮನೆ ಪ್ರಚಾರ

0

ಶಾಸಕಿ ಭಾಗೀರಥಿ ಮುರುಳ್ಯ ಉಪಸ್ಥಿತಿ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪರವಾಗಿ ಕನಕಮಜಲು ಬಿಜೆಪಿ ಬೂತ್ ಸಮಿತಿಯ ವತಿಯಿಂದ ಚಾವಡಿ ಸಭೆ ಹಾಗೂ ಮನೆ ಮನೆ ಭೇಟಿ ಕಾರ್ತಕ್ರಮವು ಶಾಸಕಿ ಭಾಗೀರಥಿ ಮುರುಳ್ಯ ಅವರ ಉಪಸ್ಥಿತಿಯಲ್ಲಿ ಬೂತ್ ಸಮಿತಿ ಕಾರ್ಯದರ್ಶಿ ಹರಿಪ್ರಸಾದ್ ಮಾಣಿಕೋಡಿ ಅವರ ಮನೆಯಲ್ಲಿ ಎ.13ರಂದು ಸಂಜೆ ಜರುಗಿತು.

ಸಭೆಯಲ್ಲಿ ಬಿಜೆಪಿ ಅಜ್ಜಾವರ ಮಹಾಶಕ್ತಿಕೇಂದ್ರದ ಅಧ್ಯಕ್ಷ ಹೇಮಂತ್ ಮಠ, ಕನಕಮಜಲು ಬೂತ್ ಸಮಿತಿ ಅಧ್ಯಕ್ಷ ಜಗನ್ನಾಥ ಬಿ.ಹೆಚ್., ಬಿಜೆಪಿ ವಕ್ತಾರರುಗಳಾದ ದೀಕ್ಷಿತ್ ಚೊಕ್ಕಾಡಿ, ಪದ್ಮನಾಭ ಚೌಟಾಜೆ, ರಾಜೇಶ್ ಮೇನಾಲ, ಸಂಯೋಜಕ ಬಾಲಚಂದ್ರ ಬಿ.ಹೆಚ್., ಕನಕಮಜಲು ಗ್ರಾ.ಪಂ‌. ಉಪಾಧ್ಯಕ್ಷ ರವಿಚಂದ್ರ ಕಾಪಿಲ, ಗ್ರಾ.ಪಂ. ಸದಸ್ಯ ಶ್ರೀಧರ ಕುತ್ಯಾಳ, ಚಂದ್ರಶೇಖರ ಕನಕಮಜಲು, ಬಿಜೆಪಿ ಕಾರ್ಯಾಲಯದ ಚಂದ್ರಶೇಖರ ನೆಡಿಲು, ತಿಲೋತ್ತಮ ಗೌಡ ಕೊಲ್ಲಂತ್ತಡ್ಕ, ಈಶ್ವರ ಕೊರಂಬಡ್ಕ, ಕಿಶೋರ್ ಬೊಮ್ಮೆಟ್ಟಿ, ಜೀವನ್ ಪೆರುಂಬಾರು, ಸಾಮಾಜಿಕ ಜಾಲತಾಣ ವಿಭಾಗದ ಪ್ರಸಾದ್ ಕಾಟೂರು ಸೇರಿದಂತೆ ಮಾಣಿಕೋಡಿ ಹಾಗೂ ಕನಕಮಜಲು ಪರಿಸರದ ಹಲವಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.