ನಾಲ್ಕೂರು: ಉಜಿರಡ್ಕ ಕೊರಗಜ್ಜ ಕ್ಷೇತ್ರದಲ್ಲಿ ದೈವಗಳ ನರ್ತನ ಸೇವೆ

0

ನಾಲ್ಕೂರು ಗ್ರಾಮದ ಉಜಿರಡ್ಕ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಕೊರಗಜ್ಜ, ಕಲ್ಲುರ್ಟಿ, ಮಂತ್ರವಾದಿ ಗುಳಿಗನ ನರ್ತನ ಸೇವೆ ವೈಭವದಿಂದ ಏ‌‌.28 ರಂದು ನಡೆಯಿತು.

ಏ.28 ರ ಸಂಜೆ ಗಂಟೆ ಶ್ರೀ ಮಾತಾ ಅಮೃತ ಕುಟುಂಬ ಏನೆಕಲ್ಲು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದು ಕಲ್ಲುರ್ಟಿ ಮತ್ತು ಮಂತ್ರವಾದಿ ಗುಳಿಗ ದೈವದ ನರ್ತನ ಸೇವೆ ನಡೆಯಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ರಾತ್ರಿ ಸ್ವಾಮಿ ಕೊರಗಜ್ಜ ದೈವದ ನರ್ತನ ಸೇವೆ ನಡೆಯಿತು. ನೂರಾರು ಸಂಖ್ಯೆಯ ಜನಪ್ರತಿನಿಧಿಗಳು, ಗಣ್ಯರು, ಭಕ್ತರು ಭಾಗವಹಿಸಿದ್ದರು. ಕ್ಷೇತ್ರದ ಆಡಳ್ತೇದಾರ ಸುರೇಶ್ ಉಜಿರಡ್ಕ, ಮನೆಮಂದಿ, ಬಂಧುಗಳು,ಸ್ಥಳೀಯರು ಸೇರಿ ಕಾರ್ಯ ಕ್ರಮ ಯಶಸ್ವಿಗೊಳಿಸಿದರು.