ಸುದ್ದಿ ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಟ

0

ಕೆ.ವಿ.ಜಿ. ಕ್ಯಾಂಪಸ್ ಚಾಂಪಿಯನ್ – ಸುಳ್ಯ ಯುವಜನ ಸಂಯುಕ್ತ ಮಂಡಳಿ ದ್ವಿತೀಯ

ಸುದ್ದಿ ಸಮೂಹ ಸಂಸ್ಥೆಗಳ ವತಿಯಿಂದ ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಸುದ್ದಿ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸುಳ್ಯದ ಕೆ.ವಿ.ಜಿ. ಕ್ಯಾಂಪಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರೆ, ಸುಳ್ಯ ಯುವಜನ ಸಂಯುಕ್ತ ಮಂಡಳಿ ದ್ವಿತೀಯ ಬಹುಮಾನಕ್ಕೆ ಭಾಜನವಾಯಿತು.

ಪ್ರಥಮ ಸೆಮಿಫೈನಲ್ಸ್ ನಲ್ಲಿ ಪೋಲೀಸ್ ತಂಡವನ್ನು ಸೋಲಿಸಿದ ಯುವಜನ ಸಂಯುಕ್ತ ಮಂಡಳಿ ಫೈನಲ್ ಗೇರಿದರೆ, ದ್ವಿತೀಯ ಸೆಮಿಫೈನಲ್ಸ್ ನಲ್ಲಿ ಕೆವಿಜಿ ಕ್ಯಾಂಪಸ್ ಮತ್ತು ಕಾರ್ಮಿಕರ ತಂಡದ ನಡುವೆ ತಂಡ ಟೈ ಆಯಿತು. ಬಳಿಕ ನಾಣ್ಯ ಚಿಮ್ಮುಗೆ ನಡೆಸಲಾಗಿ ಕೆ.ವಿ.ಜಿ. ಕ್ಯಾಂಪಸ್ ಗೆ ಅದೃಷ್ಟ ಒಲಿದು ಅವರು ಫೈನಲ್ ಪ್ರವೇಶಿಸಿದರು.