ಸುಳ್ಯ‌ ನಗರದ ಕೆರೆಮೂಲೆಗೂ‌ ಬಂತು ಕಾಡಾನೆ ಹಿಂಡು

0

ಅಪಾರ ಕೃಷಿ ಹಾನಿ

ಕಳೆದ ವಾರ ಸುಳ್ಯ‌ ನಗರದ ಕೇರ್ಪಳ ಭಾಗಕ್ಕೆ ಬಂದಿದ್ದ ಕಾಡಾನೆಗಳ ಹಿಂಡು ಈ‌ವಾರ ಸುಳ್ಯ‌ ನಗರದ ಕೆರೆಮೂಲೆ, ಬೂಡು ಪ್ರದೇಶಕ್ಕೆ ಬಂದು ಕೃಷಿ‌ಹಾನಿಗೊಳಿಸಿರುವುದಾಗಿ ವರಿದಿಯಾಗಿದೆ.

ಕೆರೆಮೂಲೆಯಲ್ಲಿ ಈಶ್ವರಪ್ಪ ಗೌಡ ತ ತೋಟ ಸೇರಿದಂತೆ ಪಯಸ್ವಿನಿ ನದಿಗೆ ತಾಗಿಕೊಂಡಿರುವ ಕೃಷಿಕರ ತೋಟಕ್ಕೆ ಕಾಡಾನೆಗಳು ಬಂದು ಕೃಷಿ ಹಾನಿ‌ಮಾಡಿವೆ. ಅಪಾರ ಪ್ರಮಾಣದಲ್ಲಿ‌ಬಾಳೆ, ಅಡಿಕೆ, ಕೊಕ್ಕೊಕೃಷಿ ಪುಡಿ ಮಾಡಿವೆ ಎಂದು ಲೋಕೇಶ್ ಕೆರೆಮೂಲೆ ಸುದ್ದಿಗೆ ತಿಳಿಸಿದ್ದಾರೆ.