ಜಾಲ್ಸೂರು: ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಹಾಗೂ ಪ್ರೌಢಶಾಲೆ ವತಿಯಿಂದ ದಿ. ಉಪೇಂದ್ರ ಸುಬ್ರಾಯ ಕಾಮತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ

0

ಜಾಲ್ಸೂರಿನ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಹಾಗೂ ಪಯಸ್ವಿನಿ ಪ್ರೌಢಶಾಲೆಯ ವತಿಯಿಂದ ಹಿರಿಯ ಉದ್ಯಮಿ, ಪಯಸ್ವಿನಿ ಪ್ರೌಢಶಾಲೆಯ ಸ್ಥಾಪಕ ಸದಸ್ಯರಾದ ದಿ. ಕೆ. ಉಪೇಂದ್ರ ಸುಬ್ರಾಯ ಕಾಮತ್ ಅವರಿಗೆ ಶ್ರದ್ಧಾಂಜಲಿ ಸಭೆಯು ಪಯಸ್ವಿನಿ ಪ್ರೌಢಶಾಲೆಯಲ್ಲಿ ಮೇ.11ರಂದು ಬೆಳಿಗ್ಗೆ ಜರುಗಿತು.

ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡರು ದಿ. ಉಪೇಂದ್ರ ಕಾಮತ್ ಅವರು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಹಾಗೂ ಪಯಸ್ವಿನಿ ಪ್ರೌಢಶಾಲೆಗೆ ಸಲ್ಲಿಸಿದ ಕೊಡುಗೆಗಳನ್ನು ಸ್ಮರಿಸಿ, ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಸಂಚಾಲಕರಾದ ಜಾಕೆ ಸದಾನಂದ, ಖಜಾಂಜಿ ಶ್ರೀನಿವಾಸ ಭಟ್ ಡಿ., ನಿರ್ದೇಶಕರುಗಳಾದ ಎಂ.ಎಸ್.ಶ್ಯಾಮ್ ಕುಮಾರ್ ಮರಸಂಕ, ಜಯರಾಮ ರೈ ಜಾಲ್ಸೂರು, ಮೋನಪ್ಪ ಕೆ.ಎಂ., ರಾಮಚಂದ್ರ ಗೌಡ ಬುಡ್ಲೆಗುತ್ತು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲತ ಕೆ.ಆರ್. ಹಾಗೂ ಶಾಲಾ ಸಹಶಿಕ್ಷಕ ವೃಂದದವರು ಉಪಸ್ಥಿತರಿದ್ದರು.